<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Pavanaja&#039;s Blog &#187; General</title>
	<atom:link href="http://pavanaja.com/category/kannada/general1/feed/" rel="self" type="application/rss+xml" />
	<link>http://pavanaja.com</link>
	<description></description>
	<lastBuildDate>Tue, 08 May 2012 16:34:38 +0000</lastBuildDate>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.org/?v=3.3.2</generator>
		<item>
		<title>ಪಿತ್ತ ಸಚಿವ!?</title>
		<link>http://pavanaja.com/kannada/general1/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/</link>
		<comments>http://pavanaja.com/kannada/general1/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/#comments</comments>
		<pubDate>Wed, 01 Oct 2008 01:34:47 +0000</pubDate>
		<dc:creator>admin</dc:creator>
				<category><![CDATA[Featured Article]]></category>
		<category><![CDATA[General]]></category>

		<guid isPermaLink="false">http://pavanaja.com/?p=486</guid>
		<description><![CDATA[ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)      ]]></description>
			<content:encoded><![CDATA[<p>ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)<br />
 <img src="http://vishvakannada.com/files/TV-capture0001-s.jpg"  alt="" />  </p>
<img src="http://pavanaja.com/?ak_action=api_record_view&id=486&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/feed/</wfw:commentRss>
		<slash:comments>1</slash:comments>
		</item>
		<item>
		<title>ಕನ್ನಡ ಬ್ಲಾಗೋತ್ತಮರ ಸಭೆ</title>
		<link>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/</link>
		<comments>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/#comments</comments>
		<pubDate>Sun, 09 Mar 2008 23:31:37 +0000</pubDate>
		<dc:creator>admin</dc:creator>
				<category><![CDATA[Featured Article]]></category>
		<category><![CDATA[General]]></category>

		<guid isPermaLink="false">http://pavanaja.com/?p=479</guid>
		<description><![CDATA[ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.      ]]></description>
			<content:encoded><![CDATA[<p>ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.</p>
<p>ಪ್ರಥಮ ಬಾರಿಗೆ ಕನ್ನಡ ಬ್ಲಾಗೋತ್ತಮರು ಸಭೆ ಸೇರುತ್ತಿದ್ದಾರೆ. ಮಾರ್ಚ್ ೧೬ರಂದು ಸಂಜೆ ೪ ಘಂಟೆಗೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಎಲ್ಲರೂ ಸೇರುತ್ತಿದ್ದಾರೆ. ನೀವೂ ಬನ್ನಿ. ಆಸಕ್ತರನ್ನೂ ಕರೆತನ್ನಿ.</p>
<p> <img src="http://vishvakannada.com/files/blog-meet-invite.jpg"  align="center"></p>
<p><b><center>ಕನ್ನಡದ ಬ್ಲಾಗಿಗಳೆಲ್ಲ ಒಂದಾಗಿ ಬನ್ನಿ</center></b>  </p>
<img src="http://pavanaja.com/?ak_action=api_record_view&id=479&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/feed/</wfw:commentRss>
		<slash:comments>0</slash:comments>
		</item>
		<item>
		<title>ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು</title>
		<link>http://pavanaja.com/kannada/general1/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/</link>
		<comments>http://pavanaja.com/kannada/general1/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/#comments</comments>
		<pubDate>Sun, 04 Nov 2007 15:11:02 +0000</pubDate>
		<dc:creator>admin</dc:creator>
				<category><![CDATA[General]]></category>

		<guid isPermaLink="false">http://pavanaja.com/?p=460</guid>
		<description><![CDATA[ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.      ]]></description>
			<content:encoded><![CDATA[<p>ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.</p>
<p><img src="http://www.vishvakannada.com/archives/photos/vol4no5/nagesh.jpg" align="right">ನನಗೆ ವೈಯಕ್ತಿಕವಾಗಿ ಈ ಸಲದ ಪ್ರಶಸ್ತಿ ತುಂಬ ಸಂತಸವನ್ನು ತಂದಿದೆ. ಅದಕ್ಕೆ ಕಾರಣ ಪ್ರಶಸ್ತಿಗೆ ಭಾಜನರಾದ ನಾಗೇಶ ಹೆಗಡೆ ಮತ್ತು ಜಿ.ಟಿ. ನಾರಾಯಣ ರಾವ್. ಇವರಿಬ್ಬರೂ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಜಿ.ಟಿ.ಎನ್ ಬಗ್ಗೆ ನಾನು ಈಗಾಗಲೆ ಇಸ್ಮಾಯಿಲ್ ಅವರ ಬ್ಲಾಗಿನ ಕೆಳಗೆ <a href="http://ismail.in/node/12">ಟಿಪ್ಪಣಿ ನಮೂದಿಸಿದ್ದೇನೆ</a>. ನಾಗೇಶ ಹೆಗಡೆಯವರು ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ವರ್ಷಗಳಿಂದೆ ವಿಜ್ಞಾನ ವಿಶೇಷ ಹೆಸರಿನ ಅಂಕಣ ಬರೆಯುತ್ತಿದ್ದಾರೆ. ಪ್ರಜಾವಾಣಿಯಲ್ಲಿ ಸಹಾಯಕ ಸಂಪಾದಕರಾಗಿ ಮತ್ತು ಸುಧಾ ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ.</p>
<p>ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು. ಇದು ಕನ್ನಡ ವಿಜ್ಞಾನ ಲೇಖಕರುಗಳೆಲ್ಲರಿಗೆ ಸಂದ ಗೌರವ ಎಂದೂ ಹೇಳಬಹುದು.  </p>
<img src="http://pavanaja.com/?ak_action=api_record_view&id=460&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/feed/</wfw:commentRss>
		<slash:comments>0</slash:comments>
		</item>
		<item>
		<title>ಭಾರತೀಯ ಗೋವು &#8211; ವಿದೇಶೀ ಗೋವು</title>
		<link>http://pavanaja.com/kannada/general1/%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%97%e0%b3%8b%e0%b2%b5%e0%b3%81-%e0%b2%b5%e0%b2%bf%e0%b2%a6%e0%b3%87%e0%b2%b6%e0%b3%80-%e0%b2%97%e0%b3%8b%e0%b2%b5%e0%b3%81/</link>
		<comments>http://pavanaja.com/kannada/general1/%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%97%e0%b3%8b%e0%b2%b5%e0%b3%81-%e0%b2%b5%e0%b2%bf%e0%b2%a6%e0%b3%87%e0%b2%b6%e0%b3%80-%e0%b2%97%e0%b3%8b%e0%b2%b5%e0%b3%81/#comments</comments>
		<pubDate>Mon, 03 Sep 2007 00:10:35 +0000</pubDate>
		<dc:creator>admin</dc:creator>
				<category><![CDATA[General]]></category>

		<guid isPermaLink="false">http://pavanaja.com/?p=453</guid>
		<description><![CDATA[ಹೊಸನಗರ <a href="http://www.ramachandrapuramath.org">ಶ್ರೀ ರಾಮಚಂದ್ರಾಪುರ ಮಠದ</a> <a href="http://vishvakannada.com/node/262">ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು</a> ಭಾರತೀಯ <a href="http://www.vishwagou.org">ಗೋತಳಿಗಳ ಸಂರಕ್ಷಣೆಗೆ</a> ಕಂಕಣಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ <a href="http://vishvakannada.com/node/372">ತಿಳಿದಿರಬಹುದು</a>. ವಿದೇಶಿ ತಳಿಯ ಹಸುಗಳು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ, ಅವುಗಳಿಗೆ ತುಂಬ ಔಷಧೋಪಚಾರ, ನಿಯಂತ್ರಿತ ಹವೆ ಎಲ್ಲ ಅಗತ್ಯ ಎಂಬುದಾಗಿ ನಾವೆಲ್ಲ ಕೇಳಿದ್ದೇವೆ. ಭಾರತೀಯ ಗೋತಳಿಗಳು ಇಲ್ಲಿಯ ಹವಾಮಾನಕ್ಕೆ ಒಗ್ಗಿದವು. ಅವುಗಳಿಗೆ ಈ ಉಪಚಾರಗಳ ಅಗತ್ಯವಿಲ್ಲ. ನಾವು ಚಿಕ್ಕವರಿದ್ದಾಗ ಭಾರತೀಯ ಹಸುಗಳ ಹಾಲನ್ನೇ ಕುಡಿದವರು. ಆಗ ಯಾವ ಹಸುವಿಗೂ ದೊಡ್ಡ ಖಾಯಿಲೆ ಬಾಧಿಸಿದ್ದು ನನಗೆ ನೆನಪಿಲ್ಲ. ಚಿಕ್ಕಪುಟ್ಟ ಖಾಯಿಲೆಗಳು ಬಾಧಿಸಿದರೂ ಹಳ್ಳಿ ಔಷಧಿಂದಲೇ ಅವು ಗುಣವಾಗುತ್ತಿದ್ದವು. ಈಗ ಎಲ್ಲರೂ ಸಾಕುತ್ತಿರುವ ವಿದೇಶೀ ಮೂಲದ ತಳಿಸಂಕರದಿಂದ ಹುಟ್ಟಿದ ಹಸುಗಳಿಗೆ ದೊಡ್ಡ ದೊಡ್ಡ ಖಾಯಿಲೆಗಳೇ ಬಾಧಿಸುತ್ತವೆ. ಅವಕ್ಕೆ ನೀಡಬೇಕಾದ ಔಷಧಿಗೂ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದೆಲ್ಲ ಯಾಕೆ ಹೇಳಿದ್ದೆಂದರೆ ಒಂದು ಉದಾಹರಣೆ ನನ್ನಲ್ಲೇ ಇದೆ.      ]]></description>
			<content:encoded><![CDATA[<p>ಹೊಸನಗರ <a href="http://www.ramachandrapuramath.org">ಶ್ರೀ ರಾಮಚಂದ್ರಾಪುರ ಮಠದ</a> <a href="http://vishvakannada.com/node/262">ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು</a> ಭಾರತೀಯ <a href="http://www.vishwagou.org">ಗೋತಳಿಗಳ ಸಂರಕ್ಷಣೆಗೆ</a> ಕಂಕಣಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ <a href="http://vishvakannada.com/node/372">ತಿಳಿದಿರಬಹುದು</a>. ವಿದೇಶಿ ತಳಿಯ ಹಸುಗಳು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ, ಅವುಗಳಿಗೆ ತುಂಬ ಔಷಧೋಪಚಾರ, ನಿಯಂತ್ರಿತ ಹವೆ ಎಲ್ಲ ಅಗತ್ಯ ಎಂಬುದಾಗಿ ನಾವೆಲ್ಲ ಕೇಳಿದ್ದೇವೆ. ಭಾರತೀಯ ಗೋತಳಿಗಳು ಇಲ್ಲಿಯ ಹವಾಮಾನಕ್ಕೆ ಒಗ್ಗಿದವು. ಅವುಗಳಿಗೆ ಈ ಉಪಚಾರಗಳ ಅಗತ್ಯವಿಲ್ಲ. ನಾವು ಚಿಕ್ಕವರಿದ್ದಾಗ ಭಾರತೀಯ ಹಸುಗಳ ಹಾಲನ್ನೇ ಕುಡಿದವರು. ಆಗ ಯಾವ ಹಸುವಿಗೂ ದೊಡ್ಡ ಖಾಯಿಲೆ ಬಾಧಿಸಿದ್ದು ನನಗೆ ನೆನಪಿಲ್ಲ. ಚಿಕ್ಕಪುಟ್ಟ ಖಾಯಿಲೆಗಳು ಬಾಧಿಸಿದರೂ ಹಳ್ಳಿ ಔಷಧಿಂದಲೇ ಅವು ಗುಣವಾಗುತ್ತಿದ್ದವು. ಈಗ ಎಲ್ಲರೂ ಸಾಕುತ್ತಿರುವ ವಿದೇಶೀ ಮೂಲದ ತಳಿಸಂಕರದಿಂದ ಹುಟ್ಟಿದ ಹಸುಗಳಿಗೆ ದೊಡ್ಡ ದೊಡ್ಡ ಖಾಯಿಲೆಗಳೇ ಬಾಧಿಸುತ್ತವೆ. ಅವಕ್ಕೆ ನೀಡಬೇಕಾದ ಔಷಧಿಗೂ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದೆಲ್ಲ ಯಾಕೆ ಹೇಳಿದ್ದೆಂದರೆ ಒಂದು ಉದಾಹರಣೆ ನನ್ನಲ್ಲೇ ಇದೆ.</p>
<p>ಇದು ಜರುಗಿದ್ದು ಸುಮಾರು ಒಂದು ತಿಂಗಳ ಮೊದಲು. ಒಮ್ಮೆ ಸುಳ್ಯದ ಸಮೀಪದ ಊರಿನಿಂದ ನನ್ನ ತಮ್ಮ ರಾಧಾಕೃಷ್ಣನ ಫೋನು ಬಂತು. ತಮ್ಮ ಅಂದರೆ ಖಾಸಾ ತಮ್ಮ ಅಲ್ಲ, ಬೆಂಗಳೂರಿಗರ ಭಾಷೆಯಲ್ಲಿ ಕಸಿನ್. ನಾನು ಮಾತ್ರ ತಮ್ಮ ಎಂದೇ ಕರೆಯುವುದು. ಅವನೂ ನನ್ನನ್ನು ಅಣ್ಣ ಎಂದೇ ಕರೆಯುವುದು. ಇರಲಿ. ಅವನು ಫೋನು ಮಾಡಿ ಹೇಳಿದ &#8220;ಪವನಜಣ್ಣ, ಒಂದು ಔಷಧಿ ಹೆಸರು ಬರೆದುಕೊ, ಅದು ಬೆಂಗಳೂರಿನಲ್ಲಿ ಸಿಗುತ್ತದೋ ನೋಡು.  ನನ್ನ ದನಕ್ಕೆ ತೀವ್ರ ಖಾಯಿಲೆ ಇದೆ. ಅದಕ್ಕೆ ಈ ಔಷಧಿಯೇ ಬೇಕಂತೆ. ಅದು ಇಲ್ಲಿ ಎಲ್ಲೂ ಸಿಗುವುದಿಲ್ಲ. ಅಲ್ಲಿ ಸಿಕ್ಕರೆ ಕೊಂಡುಕೊಂಡು ಕೂಡಲೆ ಕಳುಹಿಸುವ ಏರ್ಪಾಡು ಮಾಡು&#8221;. ನಾನು ಬೆಂಗಳೂರಿನ ಕೆಲವು ಔಷಧಿ ಅಂಗಡಿಗಳಲ್ಲಿ ಹುಡುಕಾಡಿದಾಗ ಒಂದು ಅಂಗಡಿಯಲ್ಲಿ ಆ ಔಷಧಿ ದೊರೆಯಿತು. ೨೫ ಮಿ.ಲಿ. ಔಷಧಿಯ ಬಾಟಲಿಗೆ ೧೨೦೦ ರೂ. ಬೆಲೆ. ಅದನ್ನು ೨೫ ಡಿಗ್ರಿ ಸೆಲಿಷಿಯಸ್ ತಾಪಮಾನದ ಒಳಗೆ ಇರುವಂತೆ ನೋಡಿಕೊಳ್ಳಬೇಕು. ಕೊಂಡುಕೊಂಡರೂ ಅದನ್ನು ಬಿಸಿಯಾಗದಂತೆ ಊರಿಗೆ ಕಳುಹಿಸಬೇಕು. ನನ್ನ ಸಂಬಂಧಿಯೊಬ್ಬ ಮಂಗಳೂರು ಬೆಂಗಳೂರು ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಾನೆ. ಅವನಿಗೆ ಫೋನಾಯಿಸಿದೆ. ಅದೃಷ್ಟಕ್ಕೆ ಅವನು ಆ ದಿನ ಬೆಂಗಳೂರಿನಲ್ಲಿದ್ದ. ಅಂದರೆ ಆ ದಿನ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಾನೆ ಎಂದಾಯಿತು. ಅವನಿಗೂ, ರಾಧಾಕೃಷ್ಣನಿಗೂ ಫೋನಾಯಿಸಿ ಎಲ್ಲ ಏರ್ಪಾಡು ಮಾಡಿಯಾಯಿತು. ಔಷಧಿಯನ್ನು ನನ್ನ ಮನೆಗೆ ಕೊಂಡುಹೋಗಿ ಫ್ರಿಜ್‌ನಲ್ಲಿ ಇಟ್ಟುದಾಯಿತು. ರಾತ್ರಿ ಬಸ್ಸು ಹೊರಡಲು ಇನ್ನೇನು ೧೫ ನಿಮಿಷ ಇದೆ ಎಂದಾಗ ಔಷಧಿಯನ್ನು ಅವನ ಕೈಯಲ್ಲಿ ಇಟ್ಟೆ. ಅವನ ಬಸ್ಸು ಹವಾನಿಯಂತ್ರಿತವಾಗಿದ್ದದ್ದು ನಮಗೆ ಲಾಭದಾಯಕವಾಗಿತ್ತು. ಅವನು ಔಷಧಿಯನ್ನು ಕೂಡಲೆ ಬಸ್ಸಿನ ಒಳಗೆ ಅಂದರೆ ಹವಾನಿಯಂತ್ರಿತವಾಗಿದ್ದ ಜಾಗದಲ್ಲಿ ಸುರಕ್ಷಿತವಾಗಿಟ್ಟ. ರಾಧಾಕೃಷ್ಣ ತನ್ನ ಮನೆಯಿಂದ ೫ ಕಿ.ಮೀ. ದೂರವಿರುವ ಸುಳ್ಯಕ್ಕೆ ಬಂದು ರಾತ್ರಿ ೩.೩೦ ಘಂಟೆಗೆ ಬಸ್ಸಿನಿಂದ ಆ ಔಷಧಿಯನ್ನು ತೆಗೆದುಕೊಂಡು ಹೋದ. ಬೆಳಗ್ಗೆ ಪಶುವೈದ್ಯರು ಬಂದು ಇಂಜೆಕ್ಷನ್ ನೀಡಿದರು.</p>
<p>ಇಷ್ಟೆಲ್ಲ ಪ್ರಯತ್ನ ಪಟ್ಟೂ ಆ ಹಸು ಸತ್ತು ಹೋಯಿತು. ಆಗ ನನಗೆ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಮಾತುಗಳ ನೆನಪಾಯಿತು.  ರಾಧಾಕೃಷ್ಣ ಸಾಕಿದ್ದು ಭಾರತೀಯ ತಳಿಯ ಹಸುವಾಗಿದ್ದಿದ್ದರೆ ಈ ಎಲ್ಲ ಸಮಸ್ಯೆಗಳೂ ಇರುತ್ತಿರಲಿಲ್ಲ ಎಂದು ಅನ್ನಿಸಿದ್ದೂ ಹೌದು.  </p>
<img src="http://pavanaja.com/?ak_action=api_record_view&id=453&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%97%e0%b3%8b%e0%b2%b5%e0%b3%81-%e0%b2%b5%e0%b2%bf%e0%b2%a6%e0%b3%87%e0%b2%b6%e0%b3%80-%e0%b2%97%e0%b3%8b%e0%b2%b5%e0%b3%81/feed/</wfw:commentRss>
		<slash:comments>0</slash:comments>
		</item>
		<item>
		<title>ನಾವೂ ಹೀಗೆ ಮಾಡಬೇಕು</title>
		<link>http://pavanaja.com/kannada/general1/%e0%b2%a8%e0%b2%be%e0%b2%b5%e0%b3%82-%e0%b2%b9%e0%b3%80%e0%b2%97%e0%b3%86-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/</link>
		<comments>http://pavanaja.com/kannada/general1/%e0%b2%a8%e0%b2%be%e0%b2%b5%e0%b3%82-%e0%b2%b9%e0%b3%80%e0%b2%97%e0%b3%86-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/#comments</comments>
		<pubDate>Sat, 28 Jul 2007 20:56:14 +0000</pubDate>
		<dc:creator>admin</dc:creator>
				<category><![CDATA[General]]></category>

		<guid isPermaLink="false">http://pavanaja.com/?p=449</guid>
		<description><![CDATA[ಚೀನಾದಲ್ಲಿ ಒಬ್ಬ ಲಾಯರ್‍ ಮೆಕ್‌ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು <a href="http://uk.news.yahoo.com/rtrs/20070727/tod-uk-china-mcdonalds-d987f7f.html">ವರದಿಯಾಗಿದೆ</a>. ಮೆಕ್‌ಡೊನಾಲ್ಡ್‌ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.      ]]></description>
			<content:encoded><![CDATA[<p>ಚೀನಾದಲ್ಲಿ ಒಬ್ಬ ಲಾಯರ್‍ ಮೆಕ್‌ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು <a href="http://uk.news.yahoo.com/rtrs/20070727/tod-uk-china-mcdonalds-d987f7f.html">ವರದಿಯಾಗಿದೆ</a>. ಮೆಕ್‌ಡೊನಾಲ್ಡ್‌ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.</p>
<p>ಈ ಪ್ರಕರಣ ನಮಗೆ ಕಣ್ಣುತೆರೆಸಬೇಕು. ನಮ್ಮದೇ ಆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕರಾರಸಾಸಂ) ಉದಾಹರಣೆಯನ್ನು ನೋಡೋಣ. ಅವರು ಕನ್ನಡವನ್ನು ಬಳಸುವುದಿಲ್ಲ. ಅವರ ನಿರ್ವಾಹಕರು (ಕಂಡಕ್ಟರ್‍) ಕುತ್ತಿಗೆಗೆ ನೇತಾಡಿಸಿಕೊಳ್ಳುವ ಟಿಕೆಟ್ ನೀಡುವ ಯಂತ್ರದಲ್ಲಿ ಕನ್ನಡವಿಲ್ಲ. ಕರ್ನಾಟಕದ ಹಳ್ಳಿಯೊಂದರಿಂದ ಇನ್ನೊಂದು ಹಳ್ಳಿಗೆ ಹೋಗಬೇಕಾಗಿರುವ ಕನ್ನಡಿಗರು ಇಂಗ್ಲಿಶ್ ಭಾಷೆಯಲ್ಲಿ ಟಿಕೆಟ್ ಕೊಳ್ಳಬೇಕಾಗಿದೆ. ಅವರು ಅಂತರಜಾಲ ತಾಣದ ಮೂಲಕ ಮುಂಗಡ ಟಿಕೆಟ್ ಕಾದಿರಿಸುವ ವ್ಯವಸ್ಥೆ <a href="http://ksrtc.in/HomePage.htm">ಮಾಡಿದ್ದಾರೆ</a>. ಈ ತಾಣದಲ್ಲೂ ಕನ್ನಡವಿಲ್ಲ. ಇಲ್ಲ ಎಂದರೆ ಇಲ್ಲವೇ ಇಲ್ಲವೆಂದಲ್ಲ. ಕರಾರಸಾಸಂ ಬಗ್ಗೆ ವಿವರಗಳು ಕನ್ನಡದಲ್ಲೂ ಇವೆ. ಆದರೆ ಬಸ್ಸುಗಳ ವೇಳಾಪಟ್ಟಿ, ದರ, ಮಾರ್ಗಸೂಚಿ, ಮುಂಗಡ ಆಸನ ಕಾದಿರಿಸುವಿಕೆ ಇತ್ಯಾದಿಗಳು ಇಂಗ್ಲೀಶಿನಲ್ಲೇ ಇವೆ. ಅಂದರೆ ದತ್ತಸಂಚಯದಿಂದ ಮಾಹಿತಿ ಪಡೆಯುವಿಕೆಗಳು ಇಂಗ್ಲೀಶಿನಲ್ಲೇ ಇವೆ (ಡಾಟಾಬೇಸ್ ಇಂಗ್ಲೀಶಿನಲ್ಲಿದೆ). ಕರಾರಸಾಸಂಯ ಸೋದರ ಸಂಸ್ಥೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಮಸಾಸಂ) ಕೂಡ ಇದೇ ಮಾದರಿಯನ್ನು ಅನುಕರಿಸುತ್ತಿದೆ. ಅದರ <a href="http://www.bmtcinfo.com">ಅಂತರಜಾಲ ತಾಣದಲ್ಲೂ</a> ದತ್ತಸಂಚಯದಿಂದ ಬರುವ ಮಾರ್ಗಸೂಚಿ ಮಾಹಿತಿ ಇಂಗ್ಲೀಶಿನಲ್ಲೇ ಇದೆ.</p>
<p>ಕನ್ನಡಿಗರು ಖಂಡಿತವಾಗಿಯೂ ಈ ಎರಡು ಸಂಸ್ಥೆಗಳ ವಿರುದ್ಧ ಗ್ರಾಹಕ ವೇದಿಕೆಯಲ್ಲಿ ಕೇಸು ದಾಖಲಿಸಬಹುದು.  </p>
<img src="http://pavanaja.com/?ak_action=api_record_view&id=449&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%a8%e0%b2%be%e0%b2%b5%e0%b3%82-%e0%b2%b9%e0%b3%80%e0%b2%97%e0%b3%86-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/feed/</wfw:commentRss>
		<slash:comments>0</slash:comments>
		</item>
		<item>
		<title>ಘೋಷಿಸಿ ಧಾಳಿ ಮಾಡಿದರೇನು ಫಲ?</title>
		<link>http://pavanaja.com/kannada/general1/%e0%b2%98%e0%b3%8b%e0%b2%b7%e0%b2%bf%e0%b2%b8%e0%b2%bf-%e0%b2%a7%e0%b2%be%e0%b2%b3%e0%b2%bf-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b0%e0%b3%87%e0%b2%a8%e0%b3%81-%e0%b2%ab%e0%b2%b2/</link>
		<comments>http://pavanaja.com/kannada/general1/%e0%b2%98%e0%b3%8b%e0%b2%b7%e0%b2%bf%e0%b2%b8%e0%b2%bf-%e0%b2%a7%e0%b2%be%e0%b2%b3%e0%b2%bf-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b0%e0%b3%87%e0%b2%a8%e0%b3%81-%e0%b2%ab%e0%b2%b2/#comments</comments>
		<pubDate>Thu, 28 Jun 2007 16:55:06 +0000</pubDate>
		<dc:creator>admin</dc:creator>
				<category><![CDATA[General]]></category>

		<guid isPermaLink="false">http://pavanaja.com/?p=444</guid>
		<description><![CDATA[ಜೂನ್ ೨೨ರಂದು ಎಲ್ಲ ಪತ್ರಿಕೆಗಳಲ್ಲಿ ಚಿತ್ರ ಸಮೇತ ಒಂದು ಸುದ್ದಿ ಪ್ರಕಟವಾಗಿತ್ತು. ಡೆಕ್ಕನ್ ಹೆರಾಲ್ಡ್‌ನ ಅಂತರಜಾಲ ಆವೃತ್ತಿಯಲ್ಲಿ ಅದನ್ನು ಈಗಲೂ <a href="http://www.deccanherald.com/Content/Jun222007/city200706228792.asp">ಓದಬಹುದು</a>. ಆ ಸುದ್ದಿ ಏನೆಂದರೆ ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯವರು ಬೆಂಗಳೂರಿನ ಸುತ್ತಮುತ್ತ ಕಳ್ಳಭಟ್ಟಿ ತಯಾರಿಸುವ ಸ್ಥಳಗಳಿಗೆ ಧಾಳಿ ಇತ್ತು ಕಳ್ಳಭಟ್ಟಿ ದಾಸ್ತಾನುಗಳನ್ನು ನಾಶ ಮಾಡಿದರು ಎಂಬುದಾಗಿ. ಸುದ್ದಿಯಲ್ಲಿ ಬರುವ ಒಂದು ಪ್ಯಾರವನ್ನು ಗಮನಿಸಿ-      ]]></description>
			<content:encoded><![CDATA[<p>ಜೂನ್ ೨೨ರಂದು ಎಲ್ಲ ಪತ್ರಿಕೆಗಳಲ್ಲಿ ಚಿತ್ರ ಸಮೇತ ಒಂದು ಸುದ್ದಿ ಪ್ರಕಟವಾಗಿತ್ತು. ಡೆಕ್ಕನ್ ಹೆರಾಲ್ಡ್‌ನ ಅಂತರಜಾಲ ಆವೃತ್ತಿಯಲ್ಲಿ ಅದನ್ನು ಈಗಲೂ <a href="http://www.deccanherald.com/Content/Jun222007/city200706228792.asp">ಓದಬಹುದು</a>. ಆ ಸುದ್ದಿ ಏನೆಂದರೆ ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯವರು ಬೆಂಗಳೂರಿನ ಸುತ್ತಮುತ್ತ ಕಳ್ಳಭಟ್ಟಿ ತಯಾರಿಸುವ ಸ್ಥಳಗಳಿಗೆ ಧಾಳಿ ಇತ್ತು ಕಳ್ಳಭಟ್ಟಿ ದಾಸ್ತಾನುಗಳನ್ನು ನಾಶ ಮಾಡಿದರು ಎಂಬುದಾಗಿ. ಸುದ್ದಿಯಲ್ಲಿ ಬರುವ ಒಂದು ಪ್ಯಾರವನ್ನು ಗಮನಿಸಿ-</p>
<p>The kingpins of the racket &#8211; Gate Akbar, Sugana Babu and Sunai John &#8211; are absconding. “We’ll track them down and book them under the Goonda Act because there are lot of cases pending against them,” he added.</p>
<p>ಇದರಲ್ಲೇನು ವಿಶೇಷ ಅನ್ನುತ್ತೀರಾ? ಸಾಮಾನ್ಯವಾಗಿ ಎಲ್ಲ ಧಾಳಿಗಳಲ್ಲೂ ಧಂಧೆಯನ್ನು ನಡೆಸುವವರು ತಪ್ಪಿಸಿಕೊಳ್ಳುತ್ತಾರೆ. ಕೆಲವು ಚಿಲ್ಲರೆ ಕೂಲಿಗಳು ಮಾತ್ರ ಸಿಕ್ಕಿಹಾಕಿಕೊಳ್ಳುತ್ತಾರೆ ಎನ್ನುತ್ತೀರಾ? ಹೌದು. ಅದಕ್ಕೆ ಕಾರಣ ಗೊತ್ತೆ? ನನಗೆ ಜೂನ್ ೨೦ರಂದು ಕರ್ನಾಟಕ ಸರಕಾರದ ವಾರ್ತಾ ಇಲಾಖೆಯಿಂದ ಒಂದು ಇಮೈಲ್ ಬಂತು. ಅದನ್ನು ಕೆಳಗೆ ನಕಲು ಮಾಡಿದ್ದೇನೆ -</p>
<table>
<tr>
<td>
ಪತ್ರಿಕಾ ಆಮಂತ್ರಣ</p>
<p>ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ಎಂ.ಎ. ಸಾದಿಕ್ ಹಾಗೂ  ಅಬಕಾರಿ ಆಯುಕ್ತರ ನೇತೃತ್ವದಲ್ಲಿ ಜೂನ್ ೨೧ ರಂದು ನಗರದ ಸುತ್ತಮುತ್ತಲಿನ ಕಳ್ಳಬಟ್ಟಿ ಪ್ರದೇಶಗಳಿಗೆ ಹಠಾತ್ ಅಬಕಾರಿ ದಾಳಿ ನಡೆಸಲಿದ್ದಾರೆ.<br />
ಅಬಕಾರಿ ಇಲಾಖೆ  ವಾಹನವು ಅಂದು ಬೆಳಿಗ್ಗೆ ೮.೦೦ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇಲ್ಲಿಂದ ಹೊರಡಲಿದೆ.<br />
ಮಾನ್ಯತೆ ಪಡೆದ ಪತ್ರಕರ್ತರು,  ಪತ್ರಿಕಾ ಛಾಯಾಗ್ರಾಹಕರು ಹಾಗೂ ವಿದ್ಯುನ್ಮಾನ ಮಾಧ್ಯಮದ  ಪ್ರತಿನಿಧಿಗಳು  ಈ  ಕಾರ್ಯಕ್ರಮದಲ್ಲಿ   ಭಾಗವಹಿಸಲು ಕೋರಿದೆ.</p>
<p>      (ಸಿ.ಎಂ. ರಂಗಾರೆಡ್ಡಿ)<br />
     ಆಯುಕ್ತರ ಪರವಾಗಿ.
</td>
</tr>
</table>
<p>ಈಗ ಹೇಳಿ? ಈ ರೀತಿ ಮೊದಲೆ ಎಲ್ಲರಿಗೂ ಟಾಂಟಾಂ ಮಾಡಿ ಧಾಳಿ ಮಾಡಿದರೆ ಧಂಧೆ ನಡೆಸುವ ವ್ಯಕ್ತಿಗಳು ಸಿಗುತ್ತಾರೆಯೇ? ಧಾಳಿಯ ಉದ್ದೇಶ ಏನು ಎಂಬುದು ಖಾತ್ರಿಯಾಯಿತು ತಾನೆ?  </p>
<img src="http://pavanaja.com/?ak_action=api_record_view&id=444&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%98%e0%b3%8b%e0%b2%b7%e0%b2%bf%e0%b2%b8%e0%b2%bf-%e0%b2%a7%e0%b2%be%e0%b2%b3%e0%b2%bf-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b0%e0%b3%87%e0%b2%a8%e0%b3%81-%e0%b2%ab%e0%b2%b2/feed/</wfw:commentRss>
		<slash:comments>0</slash:comments>
		</item>
		<item>
		<title>ಕನ್ನಡದಿಂದ ಬದುಕುವ ತಮಿಳು ಟಿವಿ ಚಾನೆಲ್</title>
		<link>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%bf%e0%b2%82%e0%b2%a6-%e0%b2%ac%e0%b2%a6%e0%b3%81%e0%b2%95%e0%b3%81%e0%b2%b5-%e0%b2%a4%e0%b2%ae%e0%b2%bf%e0%b2%b3%e0%b3%81-%e0%b2%9f/</link>
		<comments>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%bf%e0%b2%82%e0%b2%a6-%e0%b2%ac%e0%b2%a6%e0%b3%81%e0%b2%95%e0%b3%81%e0%b2%b5-%e0%b2%a4%e0%b2%ae%e0%b2%bf%e0%b2%b3%e0%b3%81-%e0%b2%9f/#comments</comments>
		<pubDate>Thu, 12 Apr 2007 12:57:03 +0000</pubDate>
		<dc:creator>admin</dc:creator>
				<category><![CDATA[General]]></category>

		<guid isPermaLink="false">http://pavanaja.com/?p=366</guid>
		<description><![CDATA[ಇತ್ತೀಚೆಗೆ ನನ್ನ ಡಿಶ್ ಟಿವಿಯ ವಾರ್ಷಿಕ ಚಂದಾ ಮುಗಿದಿತ್ತು. ಅದನ್ನು ನವೀಕರಿಸುವುದೋ ಬೇಡವೋ ಎಂಬ ಆಲೋಚನೆಯಲ್ಲಿದ್ದಾಗ ಅವರು ಯಾವ ಯಾವ ಚಾನೆಲುಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಮತ್ತೊಮ್ಮೆ ವಿಮರ್ಶೆ ಮಾಡಿದೆ. ಅವರು ನೀಡುವ ಚಾನೆಲುಗಳ ಪಟ್ಟಿಯಲ್ಲಿ ಕನ್ನಡದ ಉಚಿತ ಖಾಸಗಿ ಚಾನೆಲು ಯಾವುದೂ ಇಲ್ಲ. ಸರಕಾರವು ಉಚಿತವಾಗಿ ನೀಡುತ್ತಿರುವ ದೂರದರ್ಶನದ ಚಂದನ ಮಾತ್ರ ಇದೆ. ದೂರದರ್ಶನದ ಎಲ್ಲ ಚಾನೆಲುಗಳು ಉಚಿತವೇ. ಕನ್ನಡ ಮಾತ್ರವಲ್ಲ.      ]]></description>
			<content:encoded><![CDATA[<p>ಇತ್ತೀಚೆಗೆ ನನ್ನ ಡಿಶ್ ಟಿವಿಯ ವಾರ್ಷಿಕ ಚಂದಾ ಮುಗಿದಿತ್ತು. ಅದನ್ನು ನವೀಕರಿಸುವುದೋ ಬೇಡವೋ ಎಂಬ ಆಲೋಚನೆಯಲ್ಲಿದ್ದಾಗ ಅವರು ಯಾವ ಯಾವ ಚಾನೆಲುಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಮತ್ತೊಮ್ಮೆ ವಿಮರ್ಶೆ ಮಾಡಿದೆ. ಅವರು ನೀಡುವ ಚಾನೆಲುಗಳ ಪಟ್ಟಿಯಲ್ಲಿ ಕನ್ನಡದ ಉಚಿತ ಖಾಸಗಿ ಚಾನೆಲು ಯಾವುದೂ ಇಲ್ಲ. ಸರಕಾರವು ಉಚಿತವಾಗಿ ನೀಡುತ್ತಿರುವ ದೂರದರ್ಶನದ ಚಂದನ ಮಾತ್ರ ಇದೆ. ದೂರದರ್ಶನದ ಎಲ್ಲ ಚಾನೆಲುಗಳು ಉಚಿತವೇ. ಕನ್ನಡ ಮಾತ್ರವಲ್ಲ.</p>
<p>ಹಾಗೆಯೇ ಕಣ್ಣಾಡಿಸಿದಾಗ ಒಂದು ಸ್ವಾರಸ್ಯಕರವಾದ ವಿಷಯ ಪತ್ತೆಯಾಯಿತು. ತಮಿಳು ಚಾನೆಲ್ ಸನ್ ಉಚಿತವಾಗಿದೆ. ಅದನ್ನು <a href="http://www.dishtvindia.in/static/packDishWelcome.asp">ಫ್ರೀ ಟು ಏರ್ ಚಾನೆಲುಗಳ ಪಟ್ಟಿಯಲ್ಲಿ</a> ಸೇರಿಸಿದ್ದಾರೆ. ಸನ್ ನೆಟಟ್‌ವರ್ಕ್‌ನವರ ಕನ್ನಡ ಚಾನೆಲುಗಳು &#8211; <a href="http://www.sunnetwork.in/Channels/default.htm"> ಉದಯ, ಉದಯ ವಾರ್ತೆ, ಉಷೆ, ಇತ್ಯಾದಿ</a>. ಇವು ಯಾವುವೂ ಉಚಿತವಲ್ಲ. ಅಂದರೆ ಸನ್ ನೆಟ್‌ವರ್ಕ್‌ನವರು ನಮ್ಮ ಹಣದಲ್ಲಿ ತಮಿಳು ಚಾನೆಲನ್ನು ಪೋಷಿಸುತ್ತಿದ್ದಾರೆ ಎಂದ ಹಾಗಾಯಿತು.</p>
<p>ಕರ್ನಾಟಕದಲ್ಲಿ ನೀರು ಸಂಗ್ರಹಿಸಿ ತಮಿಳುನಾಡಿಗೆ ನೀರು ಬಿಡಬೇಕು ಎಂಬ ಅವರ ವಾದ ಗೊತ್ತೇ ಇದೆ. ಕರ್ನಾಟಕದ ಕೈಗಾದಲ್ಲಿ ವಿದ್ಯುತ್ ತಯಾರಿಸಿ ಅದರಲ್ಲಿ ಶೇಕಡ 75ರಷ್ಟು ತಮಿಳುನಾಡಿಗೆ ನೀಡುವುದೂ ನಿಮಗೆ ಗೊತ್ತಿರಬಹುದು (ಹೋಲಿಕೆಗಾಗಿ, ತಮಿಳುನಾಡಿನಲ್ಲಿರುವ ಕಲ್ಪಾಕಂನಲ್ಲಿ ತಯಾರಾಗುವ ವಿದ್ಯುತ್ತಿನಲ್ಲಿ ಶೇಕಡ 75 ತಮಿಳುನಾಡಿಗೆ ಹೋಗುತ್ತಿದೆ). ಕನ್ನಡಿಗರು ಹಣ ನೀಡಿ ತಮಿಳು ಚಾನೆಲನ್ನು ಸಾಕುತ್ತಿರುವುದು ಇನ್ನೊಂದು ಕುತಂತ್ರ. ಹೇಗಿದೆ ನೋಡಿ? ಕನ್ನಡಿಗರ ಮೇಲಿನ ದಬ್ಬಾಳಿಕೆ? ನಾನಂತೂ ಉದಯ ಮತ್ತು ಸನ್‌ನವರ ಇತರೆ ಚಾನೆಲುಗಳನ್ನು ನೋಡುತ್ತಿಲ್ಲ. ನೀವೂ ಹಣ ನೀಡಿ ನೋಡಬೇಡಿ.  </p>
<img src="http://pavanaja.com/?ak_action=api_record_view&id=366&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%bf%e0%b2%82%e0%b2%a6-%e0%b2%ac%e0%b2%a6%e0%b3%81%e0%b2%95%e0%b3%81%e0%b2%b5-%e0%b2%a4%e0%b2%ae%e0%b2%bf%e0%b2%b3%e0%b3%81-%e0%b2%9f/feed/</wfw:commentRss>
		<slash:comments>1</slash:comments>
		</item>
		<item>
		<title>ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ</title>
		<link>http://pavanaja.com/kannada/general1/%e0%b2%97%e0%b2%be%e0%b2%a2%e0%b2%be%e0%b2%82%e0%b2%a7%e0%b2%95%e0%b2%be%e0%b2%b0%e0%b2%a6%e0%b3%8a%e0%b2%b3%e0%b3%81-%e0%b2%a8%e0%b2%9f%e0%b2%a8-%e0%b2%aa%e0%b2%9f%e0%b3%81-%e0%b2%ae%e0%b3%87/</link>
		<comments>http://pavanaja.com/kannada/general1/%e0%b2%97%e0%b2%be%e0%b2%a2%e0%b2%be%e0%b2%82%e0%b2%a7%e0%b2%95%e0%b2%be%e0%b2%b0%e0%b2%a6%e0%b3%8a%e0%b2%b3%e0%b3%81-%e0%b2%a8%e0%b2%9f%e0%b2%a8-%e0%b2%aa%e0%b2%9f%e0%b3%81-%e0%b2%ae%e0%b3%87/#comments</comments>
		<pubDate>Mon, 26 Mar 2007 19:26:45 +0000</pubDate>
		<dc:creator>admin</dc:creator>
				<category><![CDATA[General]]></category>

		<guid isPermaLink="false">http://pavanaja.com/?p=359</guid>
		<description><![CDATA[ಅಂತಾರಾಷ್ಟ್ರೀಯ  ತಂತ್ರಾಂಶ ತಯಾರಿಯಲ್ಲಿ ಖ್ಯಾತರಾಗಿರುವ ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸದಲ್ಲಿರುವ ಮೈಕೇಲ್ ಕಪ್ಲಾನ್ ತಮ್ಮ ಬ್ಲಾಗಿನಲ್ಲಿ ಒಮ್ಮೆ, ಎಲ್ಲ ಅಕ್ಷರಗಳೂ ಇರುವ ವಾಕ್ಯದ ಬಗ್ಗೆ <a href="http://blogs.msdn.com/michkap/archive/2007/03/20/1917602.aspx">ಬರೆದರು</a>. ಸಾಮಾನ್ಯವಾಗಿ ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು The quick brown fox jumps over the lazy dog. ಏನೀ ವಾಕ್ಯದ ವಿಶೇಷ? ಈ ವಾಕ್ಯದಲ್ಲಿ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರಗಳೂ ಇವೆ. ಯಾವುದಾದರೊಂದು ಫಾಂಟ್‌ನಲ್ಲಿ ಅಕ್ಷರಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಉದಾಹರಿಸಲು ಈ ವಾಕ್ಯವನ್ನು ಬಳಸುತ್ತಾರೆ.      ]]></description>
			<content:encoded><![CDATA[<p>ಅಂತಾರಾಷ್ಟ್ರೀಯ  ತಂತ್ರಾಂಶ ತಯಾರಿಯಲ್ಲಿ ಖ್ಯಾತರಾಗಿರುವ ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸದಲ್ಲಿರುವ ಮೈಕೇಲ್ ಕಪ್ಲಾನ್ ತಮ್ಮ ಬ್ಲಾಗಿನಲ್ಲಿ ಒಮ್ಮೆ, ಎಲ್ಲ ಅಕ್ಷರಗಳೂ ಇರುವ ವಾಕ್ಯದ ಬಗ್ಗೆ <a href="http://blogs.msdn.com/michkap/archive/2007/03/20/1917602.aspx">ಬರೆದರು</a>. ಸಾಮಾನ್ಯವಾಗಿ ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು The quick brown fox jumps over the lazy dog. ಏನೀ ವಾಕ್ಯದ ವಿಶೇಷ? ಈ ವಾಕ್ಯದಲ್ಲಿ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರಗಳೂ ಇವೆ. ಯಾವುದಾದರೊಂದು ಫಾಂಟ್‌ನಲ್ಲಿ ಅಕ್ಷರಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಉದಾಹರಿಸಲು ಈ ವಾಕ್ಯವನ್ನು ಬಳಸುತ್ತಾರೆ.</p>
<p>ಅದೇ ಬ್ಲಾಗಿನಲ್ಲಿ ಕಪ್ಲಾನ್ ಅವರು ಇತರೆ ಹಲವು ಭಾಷೆಗಳಲ್ಲಿ ಇಂತಹುದೇ ಕೆಲವು ವಾಕ್ಯಗಳ ಉದಾಹರಣೆ ನೀಡಿದ್ದರು. ಆದರೆ ಅವರು ಹಿಂದಿ ಭಾಷೆಯಲ್ಲಿ ನೀಡಿದ ವಾಕ್ಯ ನನಗೆ ಹಿಡಿಸಲಿಲ್ಲ. ಅದರಲ್ಲಿ ಹಿಂದಿ ಭಾಷೆಯ ಎಲ್ಲ ಅಕ್ಷರಗಳಿರಲಿಲ್ಲ. ಹಾಗೆ ನೋಡಿದರೆ ಯಾವ ಭಾರತೀಯ ಭಾಷೆಯಲ್ಲಿಯೇ ಆಗಲಿ, ಅದರಲ್ಲಿ ಸಾಧ್ಯವಿರುವ ಎಲ್ಲ ಅಕ್ಷರಗಳ ಎಲ್ಲ ತೋರಿಕೆಯ ಪ್ರಕಾರಗಳನ್ನು ತೋರಿಸಬೇಕಾದರೆ ಹದಿನೈದು ಸಾವಿರದಷ್ಟು ಅಕ್ಷರಗಳು ಬೇಕಾಗಬಹುದು. ಹಾಗೆಂದು ಅದೇ ಬ್ಲಾಗಿನಲ್ಲಿ ನನ್ನ ಟಿಪ್ಪಣಿಯನ್ನೂ ಸೇರಿಸಿದೆ.  ಎಲ್ಲ ಅಕ್ಷರಗಳ ಅಲ್ಲ ಸಂಯುಕ್ತಾಕ್ಷರಗಳೂ ಬೇಕಾಗಿಲ್ಲ. ಆದರೆ ಎಲ್ಲ ಮೂಲಾಕ್ಷರಗಳೂ ಇದ್ದರೆ ಸಾಕು ಎಂದು ಅವರೇ ಉತ್ತರಿಸಿದರು.</p>
<p>ನಾನೂ ಇಂತಹ ಒಂದು ವಾಕ್ಯವನ್ನು ಕನ್ನಡದಲ್ಲಿ ರಚಿಸುವ ಬಗ್ಗೆ ತುಂಬ ತಲೆಕೆಡಿಸಿಕೊಂಡಿದ್ದೆ. ಕೇವಲ ಎಲ್ಲ ಮೂಲಾಕ್ಷರಗಳನ್ನು ಮಾತ್ರ ಬಳಸಿದರೆ ಅದು ಅರ್ಥಹೀನ ಅಕ್ಷರಸಮೂಹವಾಗಬಹುದಷ್ಟೇ. ಸ್ವರಗಳನ್ನು ಬಳಸಲೇ ಬೇಕು. &#8220;ಇಗೋ ಕನ್ನಡ&#8221; ಖ್ಯಾತಿಯ ಪ್ರೊ| ಜಿ. ವೆಂಕಟಸುಬ್ಬಯ್ಯನವರಿಗೆ ಫೋನಾಯಿಸಿ ಇಂತಹ ಒಂದು ವಾಕ್ಯ ನಿಮಗೆ ಗೊತ್ತಿದೆಯೇ ಎಂದು ಕೇಳಿದೆ. ಸ್ವಾರಸ್ಯವೆಂದರೆ ಅವರೂ ಇಂತಹ ಒಂದು ವಾಕ್ಯ ಕನ್ನಡಕ್ಕೆ ಬೇಕು ಎಂದು ತಿಳಿದಿದ್ದರು. ಆದರೆ ಅವರಲ್ಲಿ ಇಂತಹ ವಾಕ್ಯ ಸಿದ್ಧವಿರಲಿಲ್ಲ.</p>
<p>ಇಂತಹ ಒಂದು ವಾಕ್ಯವನ್ನು ಕ್ಷಣದಲ್ಲೇ ಸಿದ್ಧ ಮಾಡಬಲ್ಲ ವ್ಯಕ್ತಿಯೆಂದರೆ ಪ್ರಪಂಚದಲ್ಲೇ ಏಕೈಕ ಕನ್ನಡ ಶತಾವಧಾನಿ ಎಂಬ ಖ್ಯಾತರಾಗಿರುವ <a href="http://vishvakannada.com/node/325">ಡಾ| ರಾ. ಗಣೇಶ</a> ಅವರು. ಸರಿ. ಅವರಿಗೇ ಫೋನಾಯಿಸದೆ. ಸಾಯಂಕಾಲ ಪುನ ಫೋನು ಮಾಡಿ. ಎಂದರು. ಸಾಯಂಕಾಲ ಅಲ್ಲ, ಮರುದಿನ ಅವರೇ ಫೋನು ಮಾಡಿದರು. ಕೂಡಲೇ ಕಾಗದ ಪೆನ್ನು ಸಿದ್ಧ ಮಾಡಿಕೊಂಡು ಅವರು ಹೇಳಿದ ವಾಕ್ಯಗಳನ್ನು ಬರೆದುಕೊಂಡೆ. ಅವು ಕೇವಲ ವಾಕ್ಯಗಳಾಗಿರಲಿಲ್ಲ.  ಒಂದು ಸಂಪೂರ್ಣ ಅರ್ಥಪೂರ್ಣ ಛಂದೋಬದ್ಧವಾದ ಪದ್ಯವೇ ಆಗಿತ್ತು -<br />
<center><b><br />
ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ<br />
ಸಞ್ಚಲಿಸೆ, ಬೆಳಕು ಝರಿಯಂತೆ ಹರಿದಾಡಿ ಮೂಡಿ<br />
ಜೀವ ಭಙ್ಗಿಯ ಜಾಣ್ಮೆ ಕಥಿಸೆ ಕೌಶಲ ಕೇಳಿ<br />
ಫಲವೊ ಛಲರಹಿತ ರಸನಿಷ್ಠೈಕ ಮೋದಕೃತಿಯೇ<br />
</b></center></p>
<p>ಭಂಗಿ ಎಂಬುದನ್ನು ಭಙ್ಗಿ ಎಂದೂ ಬರೆಯಬಹುದು. ಅದೇ ರೀತಿ ಸಂಚಲಿಸೆ ಎಂಬುದನ್ನು ಸಞ್ಚಲಿಸೆ ಎಂದೂ ಬರೆಯಬಹುದು. ಇದು ಸಂಸ್ಕೃತದಲ್ಲಿ ಸಾಮಾನ್ಯವಾಗಿ ಬರೆಯುವ ವಿಧಾನ ಕೂಡ.</p>
<p>ದಯವಿಟ್ಟು ಎಲ್ಲ ಕನ್ನಡ ತಂತ್ರಜ್ಞರು ಈ ಪದ್ಯವನ್ನು ಪ್ರಚಲಿಸಬೇಕಾಗಿ ವಿನಂತಿ.  </p>
<img src="http://pavanaja.com/?ak_action=api_record_view&id=359&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%97%e0%b2%be%e0%b2%a2%e0%b2%be%e0%b2%82%e0%b2%a7%e0%b2%95%e0%b2%be%e0%b2%b0%e0%b2%a6%e0%b3%8a%e0%b2%b3%e0%b3%81-%e0%b2%a8%e0%b2%9f%e0%b2%a8-%e0%b2%aa%e0%b2%9f%e0%b3%81-%e0%b2%ae%e0%b3%87/feed/</wfw:commentRss>
		<slash:comments>5</slash:comments>
		</item>
		<item>
		<title>ನಂ.1 ಆಗುವುದು ಹೇಗೆ?</title>
		<link>http://pavanaja.com/kannada/general1/%e0%b2%a8%e0%b2%82-1-%e0%b2%86%e0%b2%97%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/</link>
		<comments>http://pavanaja.com/kannada/general1/%e0%b2%a8%e0%b2%82-1-%e0%b2%86%e0%b2%97%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/#comments</comments>
		<pubDate>Fri, 26 Jan 2007 17:15:14 +0000</pubDate>
		<dc:creator>admin</dc:creator>
				<category><![CDATA[General]]></category>

		<guid isPermaLink="false">http://pavanaja.com/?p=348</guid>
		<description><![CDATA[ಶೀರ್ಷಿಕೆ ಓದಿದ ತಕ್ಷಣ ನಿಮ್ಮ ಮನದಲ್ಲಿ ಏನು ಆಲೋಚನೆ ಬಂದಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ವ್ಯಕ್ತಿತ್ವ ವಿಕಸನದ ಬಗ್ಗೆ ಕೊರೆಯಲು ಹೊರಟಿದ್ದೇನೆ ಎಂದುಕೊಂಡಿದ್ದೀರಾ? ಖಂಡಿತ ಇಲ್ಲ. ನೀವು ನಿಜವಾಗಿಯೂ ನಂ.1 ಆಗಬೇಕಿದ್ದರೆ ಅದರ ಬಗ್ಗೆ ಮಾರುಕಟ್ಟೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಕೊಂಡು ಓದಬಹದು. ಅವುಗಳನ್ನು ಕೊಂಡರೆ ನೀವು ನಂ.1 ಆಗುತ್ತೀರೋ ಇಲ್ಲವೋ, ಆದರೆ, ಪುಸ್ತಕ ಬರೆದವರು ಮತ್ತು ಪ್ರಕಾಶಿಸಿದವರು ನಂ.1 ಆಗುತ್ತಾರೆ.      ]]></description>
			<content:encoded><![CDATA[<p>ಶೀರ್ಷಿಕೆ ಓದಿದ ತಕ್ಷಣ ನಿಮ್ಮ ಮನದಲ್ಲಿ ಏನು ಆಲೋಚನೆ ಬಂದಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ವ್ಯಕ್ತಿತ್ವ ವಿಕಸನದ ಬಗ್ಗೆ ಕೊರೆಯಲು ಹೊರಟಿದ್ದೇನೆ ಎಂದುಕೊಂಡಿದ್ದೀರಾ? ಖಂಡಿತ ಇಲ್ಲ. ನೀವು ನಿಜವಾಗಿಯೂ ನಂ.1 ಆಗಬೇಕಿದ್ದರೆ ಅದರ ಬಗ್ಗೆ ಮಾರುಕಟ್ಟೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಕೊಂಡು ಓದಬಹದು. ಅವುಗಳನ್ನು ಕೊಂಡರೆ ನೀವು ನಂ.1 ಆಗುತ್ತೀರೋ ಇಲ್ಲವೋ, ಆದರೆ, ಪುಸ್ತಕ ಬರೆದವರು ಮತ್ತು ಪ್ರಕಾಶಿಸಿದವರು ನಂ.1 ಆಗುತ್ತಾರೆ.</p>
<p>ಇರಲಿ. ಅದನ್ನು ಬಿಟ್ಟು ಬಿಡಿ. ಈಗ ವಿಷಯಕ್ಕೆ ಬರೋಣ. ಬೆಂಗಳೂರಿನ ಎಫ್.ಎಂ. ರೇಡಿಯೋ ಕೇಂದ್ರಗಳನ್ನು ಕೇಳಿದ್ದೀರಾ? ಅವರು ಮಾತನಾಡುವ ಕನ್ನಡ, ಕ್ಷಮಿಸಿ, ಕಂಗ್ಲಿಷ್ ಕೇಳಿದ್ದೀರಾ? ಅದರ ಬಗ್ಗೆ ಪ್ರತ್ಯೇಕವಾಗಿ ಬರೆಯುವಷ್ಟಿದೆ. ಈಗಿನ ವಿಷಯ ಅದಲ್ಲ. ಎಲ್ಲ ಎಫ್.ಎಂ ಕೇಂದ್ರದವರೂ ಒಂದು ಮಾತನ್ನು ಖಂಡಿತವಾಗಿ ಹೇಳುತ್ತಾರೆ. ಅದುವೇ &#8220;ನೀವು &#8230;.. ಕೇಳುತ್ತಿದ್ದೀರಾ. ಇದು ಬೆಂಗಳೂರಿನ ನಂ.1. ಎಫ್.ಎಂ ಚಾನೆಲ್ ಆಗಿದೆ&#8221;. ಆದುದರಿಂದ ನಾನು ಹೇಳುವುದು ಇಷ್ಟೆ. ನೀವು ನಂ.1 ಆಗಬೇಕಿದ್ದರೆ ಬೆಂಗಳೂರಿನ ಯಾವುದಾದರೂ ಎಫ್.ಎಂ. ಚಾನೆಲಿನ ರೇಡಿಯೋ ಜಾಕಿ ಆಗದರೆ ಸಾಕು. ಎಲ್ಲ ಚಾನೆಲುಗಳೂ ನಂ.1, ಎಲ್ಲ ರೇಡಿಯೋ ಜಾಕಿಗಳೂ ನಂ.1 <img src='http://pavanaja.com/wp-includes/images/smilies/icon_smile.gif' alt=':)' class='wp-smiley' /> </p>
<p>ಒಬ್ಬ ಜಗದ್ವಿಖ್ಯಾತ ಗಣಿತಜ್ಞರನ್ನು ಪತ್ರಿಕಾಕರ್ತರು ಸಂದರ್ಶಿಸಿದಾಗ ಒಂದು ಪ್ರಶ್ನೆ ಕೇಳಿದ್ದರು -&#8221;ನಿಮಗೆ ಜೀವನದಲ್ಲಿ ಇದುವರೆಗೆ ಬಿಡಸಲಾಗದಂತಹ ಕ್ಲಿಷ್ಟ ಗಣಿತ ಸಮಸ್ಯೆ ಯಾವುದಾದರೂ ಎದುರಾಗಿದೆಯೇ?&#8221; ಎಂದು. ಅದಕ್ಕೆ ಅವರು ಉತ್ತರಿಸದರಂತೆ -&#8221;ಹೌದು. ಒಂದು ಪೇಸ್ಟಿನ ಜಾಹಿರಾತು ಹೇಳುತ್ತದೆ -75% ಜನರು ನಮ್ಮ ಪೇಸ್ಟ್ ಬಳಸುತ್ತಾರೆ. ಇನ್ನೊಂದು ಪೇಸ್ಟಿನ ಜಾಹಿರಾತು ಘೋಷಿಸುತ್ತದೆ &#8211; 80% ಜನರು ನಮ್ಮ ಪೇಸ್ಟ್ ಬಳುಸತ್ತಾರೆ. ಮೂರನೆಯ ಪೇಸ್ಟ್ ಕಂಪೆನಿಯ ಜಾಹಿರಾತು ಹೇಳುತ್ತದೆ -90% ಜನ ನಮ್ಮ ಪೇಸ್ಟ್ ಬಳಸುತ್ತಾರೆ. ಇದು ಹೇಗೆ ಸಾಧ್ಯ? ಒಟ್ಟುಗೂಡಿಸಿದರೆ 100% ಕ್ಕಿಂತ ಜಾಸ್ತಿ ಆಯಿತಲ್ಲ?&#8221;.</p>
<p>ನನಗೂ ಇದೇ ಸಮಸ್ಯೆ ಇದೆ. ಎಲ್ಲ ಎಫ್.ಎಂ. ಚಾನೆಲುಗಳೂ ನಂ.1 ಆಗುವುದು ಹೇಗೆ? ಯಾರಾದರೂ ಈ ಸಮಸ್ಯೆಯನ್ನು ಬಿಡಿಸುತ್ತೀರಾ?</p>
<p>ಎಫ್.ಎಂ ಚಾನೆಲುಗಳ ಕನ್ನಡ, ಅಲ್ಲ ಕಂಗ್ಲಿಷ್ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ದಲಿಂಗಯ್ಯನವರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಒಂದು ಜೋಕು ನೆನಪಿಗೆ ಬಂತು. ಟೆಲಿಫೋನು ಕಂಪೆನಿಯು ಧ್ವನಿಮುದ್ರಿತ ಸಂದೇಶ ಕೇಳಿಸುವುದು ಗೊತ್ತಿದೆ ತಾನೆ? ಅದು ಹೀಗಿದ್ದರೆ ಹೇಗೆ -&#8221;ನೀವು ಕಾಲ್ ಮಾಡಿದ ವ್ಯಕ್ತಿ ನಿಮ್ಮ ಕಾಲನ್ನು ಎತ್ತುತ್ತಿಲ್ಲ&#8221;?  </p>
<img src="http://pavanaja.com/?ak_action=api_record_view&id=348&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%a8%e0%b2%82-1-%e0%b2%86%e0%b2%97%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/feed/</wfw:commentRss>
		<slash:comments>3</slash:comments>
		</item>
		<item>
		<title>ಕಾರಾಗೃಹವನ್ನೂ ಭಾರತಕ್ಕೆ ಹೊರಗುತ್ತಿಗೆ ನೀಡಿ!</title>
		<link>http://pavanaja.com/kannada/general1/%e0%b2%95%e0%b2%be%e0%b2%b0%e0%b2%be%e0%b2%97%e0%b3%83%e0%b2%b9%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%ad%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%b9%e0%b3%8a/</link>
		<comments>http://pavanaja.com/kannada/general1/%e0%b2%95%e0%b2%be%e0%b2%b0%e0%b2%be%e0%b2%97%e0%b3%83%e0%b2%b9%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%ad%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%b9%e0%b3%8a/#comments</comments>
		<pubDate>Sun, 22 Oct 2006 23:52:41 +0000</pubDate>
		<dc:creator>admin</dc:creator>
				<category><![CDATA[General]]></category>

		<guid isPermaLink="false">http://pavanaja.com/?p=314</guid>
		<description><![CDATA[ಭಾರತವು ಹೊರಗುತ್ತಿಗೆ (ಔಟ್‌ಸೋರ್ಸಿಂಗ್‌) ಯಲ್ಲಿ ತುಂಬ ಸುದ್ದಿ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅಮೇರಿಕ ದೇಶದಲ್ಲಂತೂ ಸರಕಾರಿ ಕಾಲ್‌ಸೆಂಟರ್‌ಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಬಾರದು ಎಂದು ಒಂದು ರಾಜ್ಯದಲ್ಲಿ ಕಾನೂನನ್ನೇ ಮಾಡಿದ್ದಾರೆ. ಈ ಹೊರಗುತ್ತಿಗೆ ಎನ್ನುವುದು ಕೇವಲ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಕ್ಲಿನಿಕಲ್ ಪರೀಕ್ಷೆಗಳನ್ನೂ ಭಾರತಕ್ಕೆ ರವಾನಿಸಲು ತೊಡಗಿದ್ದಾರೆ. ಅದೇನು ಮಹಾ? <a href="http://sify.com/news/othernews/fullstory.php?id=13498514">ಕ್ರಿಶ್ಚಿಯನ್ ಪ್ರಾರ್ಥನೆಗಳೂ ಭಾರತಕ್ಕೆ</a> ಬರುತ್ತಿವೆ. ಅಮೇರಿಕ ಮಾತ್ರವಲ್ಲ. ಇಂಗ್ಲೆಂಡಿನಿಂದಲೂ ಪ್ರಾರ್ಥನಾ ಸೇವೆಗಳನ್ನು ಭಾರತೀಯ ಪಾದರಿಗಳು ಪಡೆದುಕೊಳ್ಳುತ್ತಿದ್ದಾರೆ.      ]]></description>
			<content:encoded><![CDATA[<p>ಭಾರತವು ಹೊರಗುತ್ತಿಗೆ (ಔಟ್‌ಸೋರ್ಸಿಂಗ್‌) ಯಲ್ಲಿ ತುಂಬ ಸುದ್ದಿ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅಮೇರಿಕ ದೇಶದಲ್ಲಂತೂ ಸರಕಾರಿ ಕಾಲ್‌ಸೆಂಟರ್‌ಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಬಾರದು ಎಂದು ಒಂದು ರಾಜ್ಯದಲ್ಲಿ ಕಾನೂನನ್ನೇ ಮಾಡಿದ್ದಾರೆ. ಈ ಹೊರಗುತ್ತಿಗೆ ಎನ್ನುವುದು ಕೇವಲ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಕ್ಲಿನಿಕಲ್ ಪರೀಕ್ಷೆಗಳನ್ನೂ ಭಾರತಕ್ಕೆ ರವಾನಿಸಲು ತೊಡಗಿದ್ದಾರೆ. ಅದೇನು ಮಹಾ? <a href="http://sify.com/news/othernews/fullstory.php?id=13498514">ಕ್ರಿಶ್ಚಿಯನ್ ಪ್ರಾರ್ಥನೆಗಳೂ ಭಾರತಕ್ಕೆ</a> ಬರುತ್ತಿವೆ. ಅಮೇರಿಕ ಮಾತ್ರವಲ್ಲ. ಇಂಗ್ಲೆಂಡಿನಿಂದಲೂ ಪ್ರಾರ್ಥನಾ ಸೇವೆಗಳನ್ನು ಭಾರತೀಯ ಪಾದರಿಗಳು ಪಡೆದುಕೊಳ್ಳುತ್ತಿದ್ದಾರೆ.</p>
<p>ಅದೆಲ್ಲ ಗೊತ್ತಿರುವ ವಿಷಯವೇ. ಈ ಕಾರಾಗೃಹದ ಹೊರಗುತ್ತಿಗೆ ಎಂದರೇನು? ಅಂದರೆ ಪಾಶ್ಚಾತ್ಯ ಶ್ರೀಮಂತ ದೇಶಗಳ ಕೈದಿಗಳಿಗೆ ನಮ್ಮ ದೇಶದಲ್ಲಿ ಕಾರಾಗೃಹವನ್ನು ಒದಗಿಸುವುದು.  ಗಾಭರಿಯಾಗಬೇಡಿ. ಅಂತಹ ಹೊರಗುತ್ತಿಗೆ ಇನ್ನೂ ಭಾರತಕ್ಕೆ ಬಂದಿಲ್ಲ. ಆದರೆ ಅದೂ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಂಗ್ಲೆಂಡಿನ ಕಾರಾಗೃಹಗಳಲ್ಲಿ ಜಾಗವಿಲ್ಲವಂತೆ. ಕೈದಿಗಳನ್ನಿಡಲು ಅವರು ಒಂದು ಹಡಗನ್ನೇ ನಿರ್ಮಿಸಿದ್ದರು. ಅದೂ ಈಗ ಹಳೆಯದಾಗಿ ಕೆಲಸ ನಿಲ್ಲಿಸಿದೆ. ಇನ್ನಷ್ಟು ತೇಲುವ ಕಾರಾಗೃಹಗಳನ್ನು ನಿರ್ಮಿಸಲು ಇಂಗ್ಲೆಂಡಿನ ಸರಕಾರ <a href="http://news.bbc.co.uk/2/hi/uk_news/6072454.stm">ಯೋಚಿಸುತ್ತಿದೆ</a>. &#8220;ಅಲ್ಲಿ ತೇಲುವ ಕಾರಾಗೃಹವನ್ನು ನಿರ್ಮಿಸುವ ಬದಲು ನಿಮ್ಮ ಕ್ರಿಮಿನಲ್‌ಗಳನ್ನು ನಮ್ಮಲ್ಲಿ ಕಳುಹಿಸಿಕೊಡಿ. ನಾವು ಅವರನ್ನು ನೋಡಿಕೊಳ್ಳುತ್ತೇವೆ. ಹೇಗೂ ನಮ್ಮಲ್ಲಿ ಪಾಕಿಸ್ತಾನದಿಂದ ನುಸುಳಿ ಬಂದ ಹಲವು ಕ್ರಿಮಿನಲ್‌ಗಳಿದ್ದಾರೆ. ಅವರನ್ನು ನಾವು ಪುಕ್ಕಟೆ ಸಾಕುತ್ತಿದ್ದೇವೆ. ಹಾಗೆಯೇ ನಿಮ್ಮ ಕ್ರಿಮಿನಲ್‌ಗಳನ್ನೂ ಸಾಕುತ್ತೇವೆ&#8221; ಎಂದು ಹೇಳುತ್ತ ಇನ್ನೂ ಯಾರೂ ಮುಂದೆ ಬಂದಿಲ್ಲ.  </p>
<img src="http://pavanaja.com/?ak_action=api_record_view&id=314&type=feed" alt="" />]]></content:encoded>
			<wfw:commentRss>http://pavanaja.com/kannada/general1/%e0%b2%95%e0%b2%be%e0%b2%b0%e0%b2%be%e0%b2%97%e0%b3%83%e0%b2%b9%e0%b2%b5%e0%b2%a8%e0%b3%8d%e0%b2%a8%e0%b3%82-%e0%b2%ad%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%b9%e0%b3%8a/feed/</wfw:commentRss>
		<slash:comments>0</slash:comments>
		</item>
	</channel>
</rss>

