<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>General &#8211; Pavanaja&#039;s Blog</title>
	<atom:link href="http://pavanaja.com/category/kannada/general1/feed/" rel="self" type="application/rss+xml" />
	<link>http://pavanaja.com</link>
	<description></description>
	<lastBuildDate>Thu, 24 Jan 2019 05:35:37 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.3.8</generator>
	<item>
		<title>ಮೋದಿಯ ಜನಪ್ರಿಯತೆ</title>
		<link>http://pavanaja.com/kannada/general1/modis-popularity/</link>
					<comments>http://pavanaja.com/kannada/general1/modis-popularity/#respond</comments>
		
		<dc:creator><![CDATA[U B Pavanaja]]></dc:creator>
		<pubDate>Thu, 24 Jan 2019 05:35:37 +0000</pubDate>
				<category><![CDATA[General]]></category>
		<category><![CDATA[Kannada]]></category>
		<category><![CDATA[ಮೋದಿ]]></category>
		<guid isPermaLink="false">http://pavanaja.com/?p=2258</guid>

					<description><![CDATA[ನಾನು ಗ್ಯಾಜೆಟ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಾಗಿ ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗಲೆಲ್ಲ ಅಲ್ಲಿನ ಟ್ಯಾಕ್ಸಿ ಚಾಲಕರೊಡನೆ ಮಾತನಾಡುವುದು ನನ್ನ ಹವ್ಯಾಸ. ಇದರಿಂದಾಗಿ ಅಲ್ಲಿಯ ಜನಸಾಮಾನ್ಯರ ಅಭಿಪ್ರಾಯ ಏನು ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಾನು ಕೇಳುವ ಪ್ರಶ್ನೆಗಳು -&#8220;ನೀವು ಕಳೆದ ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದಿರಿ? ದೆಹಲಿಯಲ್ಲಿ ಕೇಜ್ರಿವಾಲರಿಗೆ ಮತ ನೀಡಿದ್ದಿರಾ? ಕೇಂದ್ರದಲ್ಲಿ ಮೋದಿಗೆ ನೀಡಿದ್ದಿರಾ? ನೀವು ಅವರ ಆಡಳಿತದಿಂದ ಸಂತೃಪ್ತರಾಗಿದ್ದೀರಾ? ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ನೀಡುತ್ತೀರಾ?&#8221; ಇತ್ಯಾದಿ. ಸಾಮಾನ್ಯವಾಗಿ ಎಲ್ಲರ ಉತ್ತರ ಒಂದೇ &#8211; [&#8230;]]]></description>
										<content:encoded><![CDATA[<p>ನಾನು ಗ್ಯಾಜೆಟ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಾಗಿ ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗಲೆಲ್ಲ ಅಲ್ಲಿನ ಟ್ಯಾಕ್ಸಿ ಚಾಲಕರೊಡನೆ ಮಾತನಾಡುವುದು ನನ್ನ ಹವ್ಯಾಸ. ಇದರಿಂದಾಗಿ ಅಲ್ಲಿಯ ಜನಸಾಮಾನ್ಯರ ಅಭಿಪ್ರಾಯ ಏನು ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಾನು ಕೇಳುವ ಪ್ರಶ್ನೆಗಳು -&#8220;ನೀವು ಕಳೆದ ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದಿರಿ? ದೆಹಲಿಯಲ್ಲಿ ಕೇಜ್ರಿವಾಲರಿಗೆ ಮತ ನೀಡಿದ್ದಿರಾ? ಕೇಂದ್ರದಲ್ಲಿ ಮೋದಿಗೆ ನೀಡಿದ್ದಿರಾ? ನೀವು ಅವರ ಆಡಳಿತದಿಂದ ಸಂತೃಪ್ತರಾಗಿದ್ದೀರಾ? ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ನೀಡುತ್ತೀರಾ?&#8221; ಇತ್ಯಾದಿ. ಸಾಮಾನ್ಯವಾಗಿ ಎಲ್ಲರ ಉತ್ತರ ಒಂದೇ &#8211; ದೆಹಲಿಯಲ್ಲಿ ಕೇಜ್ರಿವಾಲರಿಗೆ, ಕೇಂದ್ರದಲ್ಲಿ ಮೋದಿಗೆ ಮತ ನೀಡಿದ್ದೇನೆ. ಕೇಜ್ರಿವಾಲರ ಆಡಳಿತ ಪೂರ್ತಿ ಸರಿಯಿಲ್ಲ. ಪ್ರಾರಂಭದಲ್ಲಿ ಎಲ್ಲದಕ್ಕೂ ಮೋದಿಯನ್ನು ದೂಷಿಸುತ್ತಿದ್ದರು. ಈಗ ಸ್ವಲ್ಪ ಸುಧಾರಿಸಿದ್ದಾರೆ. ಮೋದಿ ದೇಶಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ.</p>
<p>&nbsp;</p>
<p>ಇತ್ತೀಚೆಗೆ ಹೋದಾಗಲೂ ಎಂದಿನಂತೆ ಇವೇ ಪ್ರಶ್ನೆಗಳನ್ನು ಕೇಳಿದೆ. ಅವೇ ಉತ್ತರಗಳು ಬಂದವು. ಚಾಲಕನ್ನು ಇನ್ನೂ ಸ್ವಲ್ಪ ಚುಚ್ಚಿದೆ -&#8220;ಮೋದಿ demonitisation ಮಾಡಿ ನಿಮಗೆ ತೊಂದರೆ ಆಗಲಿಲ್ಲವೇ? ಮುಖ್ಯವಾಗಿ ನಿಮ್ಮ ವ್ಯವಹಾರಗಳು ನಗದಿನ ಮೂಲಕವೇ ನಡೆಯುವ ಕಾರಣ ನಿಮಗೆ ತೊಂದರೆ ಆಗಿರಬಹುದಲ್ಲವೇ?&#8221;. ಒಬ್ಬ ಸಾಮಾನ್ಯ ಟ್ಯಾಕ್ಸಿ ಚಾಲಕನ ಉತ್ತರ ನಿಜಕ್ಕೂ ಆಶ್ಚರ್ಯಕರವಾಗಿತ್ತು -&#8220;ಹೌದು. ನನಗೆ ನಿಜಕ್ಕೂ ತೊಂದರೆ ಆಗಿತ್ತು. ಆದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ನಾವೆಲ್ಲ ಸ್ವಲ್ಪ ತೊಂದರೆ ಸಹಿಸಿಕೊಳ್ಳಬೇಕು ತಾನೆ? ಮೋದಿ ದೇಶಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ.&#8221;</p>
<p>&nbsp;</p>
]]></content:encoded>
					
					<wfw:commentRss>http://pavanaja.com/kannada/general1/modis-popularity/feed/</wfw:commentRss>
			<slash:comments>0</slash:comments>
		
		
			</item>
		<item>
		<title>ತೆರೆದ ಪುಸ್ತಕ ಪರೀಕ್ಷೆ (Open book exam)</title>
		<link>http://pavanaja.com/kannada/general1/open-book-exam/</link>
					<comments>http://pavanaja.com/kannada/general1/open-book-exam/#comments</comments>
		
		<dc:creator><![CDATA[U B Pavanaja]]></dc:creator>
		<pubDate>Tue, 26 Jun 2018 14:18:32 +0000</pubDate>
				<category><![CDATA[General]]></category>
		<category><![CDATA[Kannada]]></category>
		<category><![CDATA[ಕನ್ನಡ]]></category>
		<category><![CDATA[ತೆರೆದ ಪುಸ್ತಕ ಪರೀಕ್ಷೆ]]></category>
		<category><![CDATA[ಪರೀಕ್ಷೆ]]></category>
		<category><![CDATA[ಶಿಕ್ಷಣ]]></category>
		<guid isPermaLink="false">http://pavanaja.com/?p=2222</guid>

					<description><![CDATA[ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್‌ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು ತಪ್ಪಾಗಿ ವರದಿ ಮಾಡಿದೆ. ಆ ಪೋಸ್ಟಿನಲ್ಲಿ ಎರಡು ವಿಷಯಗಳಿಗೆ ನಾನು ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ. ಅದರಲ್ಲಿ ಮೊದಲನೆಯದಾದ ತೆರೆದ ಪುಸ್ತಕ ಪರೀಕ್ಷೆ (open book exam) ಬಗ್ಗೆ ಇಲ್ಲಿ ಬರೆಯುತ್ತೇನೆ. ಈ open book exam ಬಗ್ಗೆ ನನಗೆ ಚೆನ್ನಾಗಿಯೇ ತಿಳಿದಿದೆ. ಎಷ್ಟರ [&#8230;]]]></description>
										<content:encoded><![CDATA[<p>ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್‌ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು ತಪ್ಪಾಗಿ ವರದಿ ಮಾಡಿದೆ. ಆ ಪೋಸ್ಟಿನಲ್ಲಿ ಎರಡು ವಿಷಯಗಳಿಗೆ ನಾನು ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ. ಅದರಲ್ಲಿ ಮೊದಲನೆಯದಾದ ತೆರೆದ ಪುಸ್ತಕ ಪರೀಕ್ಷೆ (open book exam) ಬಗ್ಗೆ ಇಲ್ಲಿ ಬರೆಯುತ್ತೇನೆ.</p>
<p>ಈ open book exam ಬಗ್ಗೆ ನನಗೆ ಚೆನ್ನಾಗಿಯೇ ತಿಳಿದಿದೆ. ಎಷ್ಟರ ಮಟ್ಟಿಗೆ ಎಂದರೆ ಮುಂಬಯಿಯಲ್ಲಿದ್ದಾಗ ನಾನೇ ಇಂತಹ ಪರೀಕ್ಷೆಗಳನ್ನು ನಡೆಸಿದ್ದೇನೆ. ಮುಂಬಯಿಯಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದಾಗ ಅಲ್ಲಿಯ ಅಧಿಕಾರಿಗಳ ಸಂಘದ ವತಿಯಿಂದ ಹತ್ತನೇ ತರಗತಿ ಪಾಸಾದ ಮಕ್ಕಳಿಗೆ ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ (BASIC language) ಪಾಠ ಮಾಡುತ್ತಿದ್ದೆ. ಅದರ ಕೊನೆಯಲ್ಲಿ ನಾನೇ ತೆರೆದ ಪುಸ್ತಕ ಪರೀಕ್ಷೆ ನಡೆಸಿದ್ದೆ. ಬಿಎಆರ್‌ಸಿಯಲ್ಲಿ ಹೊಸದಾಗಿ ಸೇರಿದ ವಿಜ್ಞಾನಿಗಳಿಗೆ ನಡೆಸುವ ತರಬೇತಿಯಲ್ಲೂ ನಾನು ಪಾಠ ಮಾಡಿದ್ದೆ. ಅಲ್ಲೂ ತೆರೆದ ಪುಸ್ತಕ ಪರೀಕ್ಷೆ ನಡೆಸಿದ್ದೆ.</p>
<p>ತೆರೆದ ಪುಸ್ತಕ ಪರೀಕ್ಷೆ ನಿಜಕ್ಕೂ ಉತ್ತಮ ಆಲೋಚನೆ. ಆದರೆ ಇದನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಎಲ್ಲ ವಿಷಯಗಳಿಗೆ ನಡೆಸಲು ಸಾಧ್ಯವಿಲ್ಲ. ಬೇಕಿದ್ದರೆ ಗಣಿತಕ್ಕೆ ಪ್ರಯೋಗಾತ್ಮಕವಾಗಿ ನಡೆಸಿ ನೋಡಬಹುದು. ವಿಜ್ಞಾನಕ್ಕೂ ನಡೆಸಬಹುದು. ಭಾಷೆ, ಸಮಾಜ, ಇತಿಹಾಸ ಇಂತಹ ವಿಷಯಗಳಿಗೆ ಸಾಧ್ಯವಿಲ್ಲ. ಹಕ್ಕಿ ಹಾರುತಿದೆ ನೋಡಿದಿರಾ ಪದ್ಯವನ್ನು ಯಾರು ಬರೆದದ್ದು ಎಂದು ಕೇಳಿದರೆ ಮಕ್ಕಳಿಗೆ ಆಲೋಚನಾ ಶಕ್ತಿಯನ್ನು ಕಲಿಸಿದಂತಾಗುತ್ತದೆಯೇ? ಅದರ ಬದಲಿಗೆ ಹಕ್ಕಿ ಹಾರುತಿದೆ ನೋಡಿದಿರಾ ಹಾಡಿನಲ್ಲಿ ಬೇಂದ್ರೆಯವರು ಕರಿನರೆ ಬಣ್ಣದ ರೆಕ್ಕೆಗಳು ಎಂದು ಏನನ್ನು ಸೂಚಿಸಿದ್ದಾರೆ ಎಂದು ಕೇಳಿದರೆ ಸ್ವಲ್ಪ ಮಟ್ಟಿಗೆ ಆಲೋಚನೆಗೆ ಹಚ್ಚಿದಂತಾಗುತ್ತದೆ. ಪಾಣಿಪತ್ ಯುದ್ಧ ಯಾವಾಗ ನಡೆಯಿತು ಎಂದು ಇಂತಹ ಪರೀಕ್ಷೆಯಲ್ಲಿ ಕೇಳುವಂತಿಲ್ಲ. ಶಿಕ್ಷಣ ತಜ್ಞರು ಕುಳಿತು ಚರ್ಚಿಸಿ ತೀರ್ಮಾನಿಸಬೇಕಾದ ವಿಷಯವಿದು.</p>
<p>ತೆರೆದ ಪುಸ್ತಕ ಪರೀಕ್ಷೆ ವಿದ್ಯಾರ್ಥಿಯ ಆಲೋಚನಾಶಕ್ತಿಯನ್ನು ಪರೀಕ್ಷಿಸುತ್ತದೆ. ಈಗಿನಂತೆ ಬಾಯಿಪಾಠ ಮಾಡುವುದನ್ನಲ್ಲ. ಆದರೆ ನಮ್ಮ ಎಷ್ಟು ಜನ ಅಧ್ಯಾಪಕರುಗಳು ಈ ನಮೂನೆಯಲ್ಲಿ ಹೇಳಿ ಕೊಡಲು ಮತ್ತು ಪರೀಕ್ಷಿಸಲು ಸಿದ್ಧರಾಗಿದ್ದಾರೆ? ಶಾಲೆಯಲ್ಲಿ ಟೀಚರು ಕೊಟ್ಟ ನೋಟ್ಸಿನಲ್ಲಿರುವ ವಾಕ್ಯಗಳನ್ನು ಹಾಗೆಯೇ ಬರೆದರೆ ಮಾತ್ರ ಮಾರ್ಕು ನೀಡುವ ಟೀಚರುಗಳೇ ತುಂಬಿದ್ದಾರೆ. ಇದನ್ನು ನಾನು ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾಗ ಪೇರೆಂಟ್ ಟೀಚರ್ಸ್ ಮೀಟಿಂಗ್‌ಗಳಲ್ಲಿ ಭಾಗವಹಿಸಿ ಆದ ಅನುಭವದಿಂದ ಹೇಳುತ್ತಿದ್ದೇನೆ. ನನ್ನ ಮಕ್ಕಳ ಮೇಲೆ ಟೀಚರುಗಳ ದೂರು ಏನಿತ್ತೆಂದರೆ ಅವರು ನೋಟ್ಸಿನಲ್ಲಿ ಕೊಟ್ಟಂತೆ ಬರೆಯುವುದಿಲ್ಲ ಎಂದು. ಸ್ವಂತ ವಾಕ್ಯದಲ್ಲಿ ಬರೆದರೇ ಸಹಿಸದ ಟೀಚರುಗಳು ಸ್ವಂತ ಅಭಿಪ್ರಾಯವನ್ನು ಮಾನ್ಯ ಮಾಡುತ್ತಾರೆಯೇ?</p>
<p>ತೆರೆದ ಪುಸ್ತಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಲೂ ತುಂಬ ಕಷ್ಟವಿದೆ. ಪುಸ್ತಕದಲ್ಲಿ ನೀಡಿದ ಮಾಹಿತಿಯನ್ನೇ ನೇರವಾಗಿ ಕೇಳುವಂತಿಲ್ಲ. ಅದರ ಆಧಾರದಲ್ಲಿ ವಿದ್ಯಾರ್ಥಿ ಆಲೋಚಿಸಿ ಬರೆಯಲು ಪ್ರೇರೇಪಿಸುವಂತೆ ಪ್ರಶ್ನೆ ಪತ್ರಿಕೆ ರೂಪಿಸಬೇಕು. ಇದೇನೂ ಸುಲಭದ ಕೆಲಸವಲ್ಲ. ಒಂದು ಉದಾಹರಣೆ ನೋಡೋಣ- ಓಮ್ಸ್ ಲಾ ಎಲ್ಲರಿಗೂ ಗೊತ್ತು. V=IR &amp; W=VI. ಆದರೆ ಇದನ್ನೇ ಆಧರಿಸಿ ಪ್ರಶ್ನೆ ಕೇಳಿ ನೋಡೋಣ. ಒಂದು ಇಸ್ತ್ರಿ ಪೆಟ್ಟಿಗೆಯ ವಾಟೇಜ್ 1000 ಇದೆ, ಅದಕ್ಕೆ ಎಷ್ಟು ಆಂಪಿಯರ್‌ನ ಫ್ಯೂಸ್ ಹಾಕಬೇಕು ಎಂದು ಪ್ರಶ್ನೆ ತಯಾರಿಸಿದರೆ ವಿದ್ಯಾರ್ಥಿ ಇರಲಿ ಅರ್ಧದಷ್ಟು ಅಧ್ಯಾಪಕರುಗಳಿಗೂ ಉತ್ತರ ಗೊತ್ತಾಗಲಾರದು. ಈ ನಮೂನೆಯ ಪ್ರಶ್ನೆ ಪತ್ರಿಕೆ ತಯಾರಿಸಲು ಎಷ್ಟು ಜನ ಅಧ್ಯಾಪಕರುಗಳಿಗೆ ಸಾಧ್ಯವಿದೆ?</p>
<p>ಆದುದರಿಂದ ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ವಿಷಯಗಳಿಗೂ ತೆರೆದ ಪುಸ್ತಕ ಪರೀಕ್ಷೆ ನಡೆಸುವಂತಿಲ್ಲ.</p>
<p>ವಸ್ತು ನಿಷ್ಠ ಪ್ರತಿಕ್ರಿಯೆಗಳಿಗೆ ಮಾತ್ರ ಸ್ವಾಗತ.</p>
]]></content:encoded>
					
					<wfw:commentRss>http://pavanaja.com/kannada/general1/open-book-exam/feed/</wfw:commentRss>
			<slash:comments>2</slash:comments>
		
		
			</item>
		<item>
		<title>ಪವನಜ &#8211; ಈ ಹೆಸರಿನಲ್ಲೇನಿದೆ?</title>
		<link>http://pavanaja.com/kannada/general1/pavanaja-name/</link>
					<comments>http://pavanaja.com/kannada/general1/pavanaja-name/#comments</comments>
		
		<dc:creator><![CDATA[U B Pavanaja]]></dc:creator>
		<pubDate>Sun, 05 Jul 2015 16:07:33 +0000</pubDate>
				<category><![CDATA[General]]></category>
		<category><![CDATA[Kannada]]></category>
		<guid isPermaLink="false">http://pavanaja.com/?p=610</guid>

					<description><![CDATA[ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ ಏನಿದ್ದರೂ ಬ್ಲಾಗುಗಳ ಕಾಲ. ಇಲ್ಲಿ ಯಾವ ಸಂಪಾದಕರ ಮರ್ಜಿಗೂ ಕಾಯಬೇಕಾಗಿಲ್ಲ. ಅಂತೆಯೇ ಹಲವು ಮಂದಿ ತಮ್ಮ ಹೆಸರಿನ ಬಗ್ಗೆ ಬ್ಲಾಗ್ ಬರೆದಿದ್ದೇ ಬರೆದಿದ್ದು. ಈ ಸಂತೇ ಮಂದಿ ಒಳಗ ನಾನೂ ಯಾಕ ನುಗ್ಬಾರ್ದು ಅಂತೀನಿ. ಅಂದ ಮ್ಯಾಲ ಹಂಗೆ ಬರೀಲೇ ಬೇಕಲ್ವಾ? [&#8230;]]]></description>
										<content:encoded><![CDATA[<p>ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ ಏನಿದ್ದರೂ ಬ್ಲಾಗುಗಳ ಕಾಲ. ಇಲ್ಲಿ ಯಾವ ಸಂಪಾದಕರ ಮರ್ಜಿಗೂ ಕಾಯಬೇಕಾಗಿಲ್ಲ. ಅಂತೆಯೇ ಹಲವು ಮಂದಿ ತಮ್ಮ ಹೆಸರಿನ ಬಗ್ಗೆ ಬ್ಲಾಗ್ ಬರೆದಿದ್ದೇ ಬರೆದಿದ್ದು. ಈ ಸಂತೇ ಮಂದಿ ಒಳಗ ನಾನೂ ಯಾಕ ನುಗ್ಬಾರ್ದು ಅಂತೀನಿ. ಅಂದ ಮ್ಯಾಲ ಹಂಗೆ ಬರೀಲೇ ಬೇಕಲ್ವಾ? ಇಗೋ ತಗೊಳ್ಳಿ. ನನ್ನ ಹೆಸರಿನ ಬಗ್ಗೆನೂ ಒಂದು ಬ್ಲಾಗ್. ಓದಿ ನಿಮ್ಮ ಸಮಯ ಹಾಳು ಮಾಡ್ಕೊಳ್ಳಿ.</p>
<p>ಮೊದಲನೆಯದಾಗಿ ನನ್ನ ಹೆಸರಿನ ಅರ್ಥ ಮತ್ತು ಅದು ಯಾಕೆ ನನಗೆ ಬಂತು ಎಂಬುದರ ಬಗ್ಗೆ ಸರಿಯಾದ ವಿವರಣೆ ನೀಡುತ್ತೇನೆ. ನಮ್ಮಲ್ಲಿ ಒಂದು ಪದ್ಧತಿ ಇದೆ. ಅದೇನೆಂದರೆ ಅಪ್ಪನ ಹೆಸರನ್ನು ಮಗನಿಗೆ ಇಡುವುದು. ಅಂದರೆ ನನಗೆ ನನ್ನ ಅಜ್ಜನ ಹೆಸರು ಬರಬೇಕು. ಈ ಅಪ್ಪನ ಹೆಸರನ್ನು ಮಗನಿಗೆ ಇಡುವ ಪದ್ಧತಿಯ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಒಂದು ವಿವರಣೆ ನೀಡಿದ್ದಾರೆ. ಅದು ಹೀಗಿದೆ &#8211; ಅಪ್ಪನಿಗೆ ಬೈಯಲಿಕ್ಕೆ ಆಗುವುದಿಲ್ಲ ನೋಡಿ. ಅದಕ್ಕೆ ಅವರ ಹೆಸರನ್ನು ಮಗನಿಗೆ ಇಟ್ಟು ಹೆಸರು ಹೇಳಿ ಯದ್ವಾತದ್ವಾ ಬೈಯುವುದು. ಈ ವಿವರಣೆ ಒತ್ತಟ್ಟಿಗಿರಲಿ. ನನ್ನ ಅಜ್ಜನ ಹೆಸರು ಭೀಮಯ್ಯ ಎಂದು. ನನ್ನ ತಂದೆ ಯಕ್ಷಗಾನ ಅರ್ಥಧಾರಿಯಾಗಿದ್ದರು. ಭಗವದ್ಗೀತೆಯನ್ನು ಕನ್ನಡದಲ್ಲಿ ವಾರ್ಧಕ ಷಟ್ಪದಿಯಲ್ಲಿ ಅನುವಾದಿಸಿದ್ದರು. ಭೀಮ ಎಂಬ ಅರ್ಥ ಬರುವ ಪವನಜ ಎಂಬ ಹೆಸರನ್ನು ನನಗೆ ಇಟ್ಟರು. ಭೀಮ ಮತ್ತು ಹನಮಂತ ಇಬ್ಬರೂ ವಾಯುಪುತ್ರರು. ಪವನ ಎಂದರೆ ವಾಯು. ಜ ಎಂದರೆ ಜನಿಸಿದ್ದು. ಪವನಜ ಎಂದರೆ ವಾಯುಪುತ್ರ ಅರ್ಥಾತ್ ಭೀಮ (ಅಥವಾ ಹನುಮಂತ). ಇದಿಷ್ಟು ನನ್ನ ಹೆಸರಿನ ವ್ಯುತ್ಪತ್ತಿಯ ವಿವರಣೆ. ಯಕ್ಷಗಾನದಲ್ಲಿ “ಏನಯ್ಯಾ ಪವನಜನೆ” ಎಂದು ಪ್ರಾರಂಭವಾಗುವ ಒಂದು ಪದ್ಯ ತುಂಬ ಪ್ರಖ್ಯಾತ.</p>
<p>ಕನ್ನಡದಲ್ಲಿ ವನಜ, ಜಲಜ, ಪಂಕಜ ಇತ್ಯಾದಿ ಹೆಸರುಗಳಿವೆ. ಈ ಎಲ್ಲ ಹೆಸರುಗಳೂ ಇರುವುದು ಸ್ತ್ರೀಯರಿಗೆ. ಜಲಜ ಎಂದರೆ ನೀರಿನಲ್ಲಿ ಜನಿಸಿದ್ದು ಎಂದರೆ ತಾವರೆ. ಪಂಕಜ ಎಂದರೆ ಕೆಸರಲ್ಲಿ ಜನಿಸಿದ್ದು ಎಂದರೆ ತಾವರೆಯೇ. ಕೆಸರಲ್ಲಿ ಜನಿಸಿದ್ದು ಎಂದರೆ ಸೊಳ್ಳೆಯೂ ಆಗಬಹುದು ಎಂದು ತರ್ಲೆ ತೆಗೆಯಬೇಡಿ ಮತ್ತೆ. ಹಾಗೆ ಹೇಳಿದರೆ ಪಂಕಜ ಎಂಬ ಹೆಸರಿನವರು ನಮಗೆ ಎರಡು ಏಟು ಕೊಟ್ಟಾರು ನೋಡಿ. ವನಜ, ಜಲಜ, ಪಂಕಜ ಇದ್ದಂತೆ ಪವನಜ ಎಂದರೂ ಹುಡುಗಿ ಇರಬಹುದು ಎಂದು ಹಲವರು ಅಂದುಕೊಂಡಿದ್ದರು. ಈಗಲೂ ಕೆಲವರು ಅಂದುಕೊಂಡಿರಬಹುದು. ನಾನು ಮೈಸೂರಿನಲ್ಲಿ ಎಂಎಸ್‌ಸಿ ಕಲಿಯುತ್ತಿದ್ದಾಗ ಊರಿನಿಂದ ನನ್ನ ಅತ್ತೆ ಮಗಳು ಹುಡುಗಿಯರಿಗೆ ಸಹಜವಾದ ಮುದ್ದಾದ ಕೈಬರಹದಲ್ಲಿ ನನಗೆ ಕಾಗದ ಬರೆದು ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ಮಾನಸಗಂಗೋತ್ರಿ ಎಂದು ವಿಳಾಸ ಬರೆದು ಪತ್ರ ಕಳುಹಿಸಿದ್ದಳು. ವಿದ್ಯಾರ್ಥಿ ನಿಲಯ ಎಂದು ಬರೆದಿತ್ತು. ಹುಡುಗರ ಹಾಸ್ಟೆಲ್ ಎಂದು ಬರೆದಿರಲಿಲ್ಲ. ಹುಡುಗಿಯರ ಹಾಸ್ಟೆಲಿಗೆ ವಿದ್ಯಾರ್ಥಿನಿ ನಿಲಯ ಎಂದು ಹೇಳುತ್ತಾರೆ ಎಂಬಷ್ಟು ಭಾಷಾಜ್ಞಾನ ಅಂಚೆಯವನಿಗಿರಲಿಲ್ಲ. ಆತ ಆ ಕಾಗದವನ್ನು ಹುಡುಗಿಯರ ಹಾಸ್ಟೆಲಿಗೆ ರವಾನಿಸಿದ್ದ. ಹುಡುಗಿಯರ ಹಾಸ್ಟೆಲಿನಲ್ಲಿದ್ದ ನನ್ನ ಕ್ಲಾಸಿನ ಹುಡುಗಿಯರು ಆ ಕಾಗದವನ್ನು ತಂದು ಅದನ್ನು ಕೊಡಬೇಕಾದರೆ ಕ್ಯಾಂಟೀನಿನಲ್ಲಿ ಮಸಾಲೆ ದೋಸೆ ಕೊಡಬೇಕು ಎಂದು ಪೀಡಿಸಿದ್ದರು.</p>
<p>ಸುಮಾರು ಹನ್ನೆರಡು ವರ್ಷಗಳ ಹಿಂದೆ (೨೦೦೩) ವಿಜಯಕರ್ನಾಟಕ ಪತ್ರಿಕೆಯಲ್ಲಿ ಇಳೆ ಎಂಬ ಹೆಸರಿನಲ್ಲಿ ನನ್ನ ಅಂಕಣ ಲೇಖನ ಪ್ರತಿ ವಾರ ಬರುತ್ತಿತ್ತು. ಅದರಲ್ಲಿ ಗಣಕ ಮತ್ತು ಅಂತರಜಾಲ ಬಗ್ಗೆ ಬರೆಯುತ್ತಿದ್ದೆ. ಓದುಗರ ಪತ್ರಗಳಿಗೆ ಉತ್ತರವನ್ನೂ ನೀಡುತ್ತಿದ್ದೆ. ಅರ್ಧದಷ್ಟು ಇಮೈಲ್‌ಗಳು dear madam ಎಂದೇ ಪ್ರಾರಂಭವಾಗುತ್ತಿದ್ದವು. ಆಗ ಗೂಗ್ಲ್ ಇಮೇಜ್ ಇರಲಿಲ್ಲ ನೋಡಿ. ಆದುದರಿಂದ ನನ್ನ ಫೋಟೋ ಎಲ್ಲೂ ಕಂಡಿರಲಿಕ್ಕಿಲ್ಲ. ಒಮ್ಮೆ ನಾನು ಆಗ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರ ಕಚೇರಿಯಲ್ಲಿ ಕುಳಿತುಕೊಂಡು ಹೀಗೆ ಉಭಯಕುಶಲೋಪರಿ ಮಾತನಾಡುತ್ತಿದ್ದಾಗ ಜಯಂತ ಕಾಯ್ಕಿಣಿಯವರು ಅಲ್ಲಿಗೆ ಬಂದಿದ್ರು. ಏನೇನೋ ಮಾತನಾಡುತ್ತ, ನನಗೆ ಡಿಯರ್ ಮೇಡಂ ಎಂದು ಇಮೈಲ್ ಬರುತ್ತಿರುವುದನ್ನು ಹೇಳಿ, ನನ್ನ ಫೋಟೋವನ್ನೂ ಪ್ರಕಟಿಸಿ ಎಂದೆ. ಆಗ ಜಯಂತ ಕಾಯ್ಕಿಣಿಯವರು ಕೂಡಲೆ ಹೇಳಿದರು -ಬೇಡ, ಆಗ ನಿಮ್ಮ ಓದುಗರ ಸಂಖ್ಯೆ ಕಡಿಮೆಯಾಗಿಬಿಡುತ್ತದೆ! ನಾನು ಸ್ತ್ರೀ ಎಂದುಕೊಂಡು ಆ ಕಾರಣಕ್ಕಾಗಿ ಎಷ್ಟು ಜನ ಓದಿದ್ದರೋ ಗೊತ್ತಿಲ್ಲ.</p>
<p>ಈಗ ಪ್ರಜಾವಾಣಿಯಲ್ಲಿ ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಸಮಸ್ಯೆ ಇಲ್ಲ. ಯಾಕೆಂದರೆ ಅದರಲ್ಲಿ ನನ್ನ ಫೋಟೋ ಕೂಡ ಇದೆ. ಅಷ್ಟು ಮಾತ್ರವಲ್ಲ, ಈಗ ಗೂಗ್ಲ್ ಇಮೇಜ್ ಇದೆ, ವಿಕಿಪೀಡಿಯ ಇದೆ, ಪತ್ರಿಕೆಗಳಲ್ಲಿ ಹಲವು ಸಲ ನನ್ನ ಫೋಟೋ ಬಂದಿದೆ. ಆದುದರಿಂದ ಈಗ ಪವನಜ ಎಂದರೆ ಸ್ತ್ರೀ ಎಂದುಕೊಳ್ಳುವವರ ಸಂಖ್ಯೆ ನಗಣ್ಯ. ನಗಣ್ಯ ಎಂದು ಯಾಕೆ ಹೇಳಿದೆನೆಂದರೆ ಹಾಗೆ ಅಂದುಕೊಳ್ಳುವವರು ಈಗಲೂ ಇದ್ದಾರೆ ಎಂದು ತಿಳಿಸಲು. ಯಾವಾಗಲೋ ಒಮ್ಮೆ “ಮೇಡಂ ಪವನಜ ಅವರಲ್ಲಿ ಮಾತನಾಡಬೇಕಿತ್ತು” ಎಂದು ಮನೆಗೆ ಫೋನ್ ಬರುವುದಿದೆ.</p>
<p>೨೦೧೧ರಲ್ಲಿ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮ ಮೈಸೂರಿನಲ್ಲಿ ಜರುಗಿತು. ಅದರಲ್ಲಿ ನಾನೂ ಮಾತನಾಡಿದ್ದೆ. ಕನ್ನಡ ವಿಕಿಪೀಡಿಯದ ಪ್ರಾತ್ಯಕ್ಷಿಕೆಯನ್ನೂ ನೀಡಿದ್ದೆ. ಆ ಕಾರ್ಯಕ್ರಮಕ್ಕೆ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವರದಿಗಾರ ಬಂದಿರಲಿಲ್ಲ. ಅವರದೇ ಸೋದರ ಪತ್ರಿಕೆಯಾಗಿದ್ದ ಕನ್ನಡಪ್ರಭದ ವರದಿಗಾರ ತಯಾರಿಸಿದ ವರದಿಯನ್ನು ಓದಿ ಅದನ್ನು ಇಂಗ್ಲೀಷಿಗೆ ಅನುವಾದಿಸಿರಬೇಕು. ಅದರಲ್ಲಿ ನನ್ನ ಬಗೆಗೆ “ಅವರು ಹೇಳಿದರು” ಎಂಬದುನ್ನು ಇಂಗ್ಲೀಷಿಗೆ ಅನುವಾದಿಸುವಾಗ she told ಎಂದು ಅನುವಾದಿಸಿದ್ದರು! ಅದೇನೋ ಹಳೆಯ ಕಥೆಯಾಯಿತು. ತೀರ ಇತ್ತೀಚೆಗೆ ಇದೇ ರೀತಿಯ ತಪ್ಪನ್ನು <a title="v4news" href="http://v4news.com/enliven-the-tulu-viki-fidia-first-and-then-add-tulu-to-the-8th-schedule-dr-ug-pavanaja-bangalore-rep-in-udupi/" target="_blank">ಜಾಲತಾಣ</a>ವೊಂದು ಮಾಡಿದೆ.</p>
<p>ಪವನಜ ಎಂದರೆ ಹನುಮಂತ ಎಂಬ ಅರ್ಥವೂ ಬರುತ್ತದೆ ಎಂದೆನಲ್ಲ. ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ನಾನು ವಿಜ್ಞಾನಿಯಾಗಿದ್ದಾಗ ಉಡುಪಿಯವರೇ ಒಬ್ಬರು ನಾರಾಯಣ ಎಂಬವರು ತುಂಬ ಆತ್ಮೀಯರಾಗಿದ್ದರು. ಅವರ ಕಂಪ್ಯೂಟರಿನಲ್ಲಿ ಏನೇ ಸಮಸ್ಯೆಯಿದ್ದರೂ ಅದನ್ನು ಪರಿಹರಿಸಲು ನಾನು ಸಹಾಯ ಮಾಡುತ್ತಿದ್ದೆ. ಒಂದು ಶನಿವಾರ, ರಜಾದಿನ, ಅವರು ಆಫೀಸಿಗೆ ಹೋಗಿದ್ದರು. ಅವರ ಕಂಪ್ಯೂಟರಿನಲ್ಲಿ ಏನೋ ಸಮಸ್ಯೆ ಬಂದಿತ್ತು. ನನ್ನ ಮನೆಗೆ ಫೋನಾಯಿಸಿದರು. ನಮ್ಮ ಮಾತುಕತೆ ಈ ರೀತಿ ನಡೆಯಿತು-<br />
ನಾನು: ಹಲೋ<br />
ಅವರು: ನಮಸ್ಕಾರ, ಹನುಮಂತ ಇದ್ದಾರಾ?<br />
“ಇಲ್ಲ, ಶ್ರೀರಾಮನ ಹತ್ತಿರ ಇದ್ದಾನೆ”<br />
“ನಾನು ನಾರಾಯಣ ಎಂದರೆ ಶ್ರೀರಾಮ. ಆತ ಇಲ್ಲಿಲ್ಲ”<br />
“ಹಾಗಿದ್ದರೆ ಆತ ನಿಮ್ಮ ಹೆಂಡತಿಯನ್ನು ಹುಡುಕಿಕೊಂಡು ಲಂಕೆಗೆ ಹೋಗಿದ್ದಾನೆ”<br />
ಮುಂದಕ್ಕೆ ಏನು ಹೇಳಬೇಕು ಎಂದು ಅವರಿಗೆ ತಿಳಿಯಲಿಲ್ಲ. ಅವರ ಜಾಗದಲ್ಲಿ ನಾನಿದ್ದರೆ ಕೇಳಿಯೇ ಬಿಡುತ್ತಿದ್ದೆ “ಅಲ್ಲಿಂದ ಬಾಲ ಸುಟ್ಟುಕೊಂಡು ವಾಪಾಸು ಬರಲಿಲ್ಲವೇ?” ಎಂದು.</p>
<p>ನಾನು ಮುಂಬಯಿಯಲ್ಲಿದ್ದಾಗ ಬಹುತೇಕ ಮಂದಿಗೆ ನನ್ನ ಹೆಸರನ್ನು ಸರಿಯಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ಕೆಲವು ಉತ್ತರ ಭಾರತೀಯರು ನನ್ನನ್ನು ತರ್ನೇಜ, ರಹೇಜ ಎಲ್ಲ ಇದ್ದಂತೆ ಪವನಜ ಎಂದರೆ ಒಬ್ಬ ಸಿಂಧಿ ಎಂದುಕೊಂಡಿದ್ದರು. ಇನ್ನು ಕೆಲವರು ನನ್ನನ್ನು ಪವನ್ ಝಾ ಎಂದುಕೊಂಡಿದ್ದರು. ಪಂಜಾಬಿಗಳಂತೂ ಪವನೇಜ ಎಂದೇ ಉಚ್ಚರಿಸುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಮನುಷ್ಯರು ಅವರ ಹೆಸರಿನ ಬದಲಿಗೆ ಊರಿನ ಹೆಸರಿನ ಮೂಲಕ ತಿಳಿಯಲ್ಪಡುತ್ತಾರೆ. ಮುಂಬಯಿಯಲ್ಲಿದ್ದ ಅಂತಹ ಕೆಲವು ಮಂದಿ ನನ್ನನ್ನು ಉಡುಪಿಯ ಪಕ್ಕದ ಪಾವಂಜದವನು ಅಂದುಕೊಂಡಿದ್ದರು.</p>
<p>&nbsp;</p>
<p>ಅದೆಲ್ಲ ಸರಿ, ಈ ಯು.ಬಿ. ಎಂದರೇನು? ವಿಜಯ ಮಲ್ಯ ಅವರ ಯು.ಬಿ.ಗೂ ನಿಮಗೂ ಏನು ಸಂಬಂಧ ಎಂದೂ ಕೆಲವರು ಪ್ರಶ್ನಿಸಿದ್ದಿದೆ. ಅದಕ್ಕೂ ನನ್ನಲ್ಲಿ ತರ್ಲೆ ಉತ್ತರಗಳಿವೆ. U.B. ಅಂದರೆ unbelievable ಎಂದು! ನಾನು ಕೆಲವೊಮ್ಮೆ ನಕ್ಷತ್ರಿಕನಂತೆ ಪೀಡಿಸುವುದಿದೆ. ಅಂತಹ ಸಂದರ್ಭಗಳಲ್ಲಿ unbearable! ನಿಜವಾದ ಪೂರ್ಣ ರೂಪ &#8211; ಉಬರಡ್ಕ ಬೆಳ್ಳಿಪ್ಪಾಡಿ. ಉಬರಡ್ಕ ನಮ್ಮ ಕುಟುಂಬದ ಮೂಲ ಊರು. ಬೆಳ್ಳಿಪ್ಪಾಡಿ ನಾನು ಜನಿಸಿ ಬೆಳೆದ ಊರು.</p>
<p>&nbsp;</p>
<p>ನಾನು ತೈವಾನಿನಲ್ಲಿದ್ದಾಗ ಅಲ್ಲಿ ನನ್ನ ಸಹೋದ್ಯೋಗಿಗಳಿಗೆ ಯಾರಿಗೂ ನನ್ನ ಹೆಸರನ್ನು ಉಚ್ಚರಿಸಲು ಬರುತ್ತಿರಲಿಲ್ಲ. Pavanaja U B ಎಂಬುದರ ಹ್ರಸ್ವ ರೂಪ PUB ಆಗುತ್ತದೆ. ಆದುದರಿಂದ ನನ್ನನ್ನು ಅಲ್ಲಿ ಪಬ್ ಎಂದೇ ಕರೆಯುತ್ತಿದ್ದರು!</p>
]]></content:encoded>
					
					<wfw:commentRss>http://pavanaja.com/kannada/general1/pavanaja-name/feed/</wfw:commentRss>
			<slash:comments>8</slash:comments>
		
		
			</item>
		<item>
		<title>ಭೈರಪ್ಪನವರ ಯಾನ</title>
		<link>http://pavanaja.com/kannada/general1/yaana/</link>
					<comments>http://pavanaja.com/kannada/general1/yaana/#comments</comments>
		
		<dc:creator><![CDATA[U B Pavanaja]]></dc:creator>
		<pubDate>Sat, 02 Aug 2014 15:39:03 +0000</pubDate>
				<category><![CDATA[General]]></category>
		<category><![CDATA[Kannada]]></category>
		<category><![CDATA[ಭೈರಪ್ಪ]]></category>
		<category><![CDATA[ಯಾನ]]></category>
		<guid isPermaLink="false">http://pavanaja.com/?p=596</guid>

					<description><![CDATA[ಭೈರಪ್ಪನವರ &#8220;ಯಾನ&#8221; ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್‌ಗಳ ಮಾತುಕತೆ ನಡೆಸಿದ್ದು -ಹೀಗೆಲ್ಲ ಅವರೇ ಹಿನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅವುಗಳ ಬಗ್ಗೆ ಪತ್ರಿಕೆಯಲ್ಲೀ ಈಗಾಗಲೆ ಬಂದಿದೆ. ಆದುದರಿಂದ ಅಂತರಿಕ್ಷಯಾನ, ಅದರಲ್ಲಿ ನಡೆಯುವ ಚಟುವಟಿಕೆಗಳು, ಅದರಿಂದ ಮನಸ್ಸಿನ ಮೇಲೆ ಆಗುವ ಪರಿಣಾಮ, ಅಲ್ಲಿಯ ಜೀವನ, ಆಹಾರ, ಇತ್ಯಾದಿ ಹಲವು ಕಲ್ಪನೆಗಳು ಮೂಡುತ್ತವೆ. ಆದರೆ ಇದು [&#8230;]]]></description>
										<content:encoded><![CDATA[<div data-ft="{&quot;tn&quot;:&quot;K&quot;}">
<p>ಭೈರಪ್ಪನವರ &#8220;ಯಾನ&#8221; ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್‌ಗಳ ಮಾತುಕತೆ ನಡೆಸಿದ್ದು -ಹೀಗೆಲ್ಲ ಅವರೇ ಹಿನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅವುಗಳ ಬಗ್ಗೆ ಪತ್ರಿಕೆಯಲ್ಲೀ ಈಗಾಗಲೆ ಬಂದಿದೆ. ಆದುದರಿಂದ ಅಂತರಿಕ್ಷಯಾನ, ಅದರಲ್ಲಿ ನಡೆಯುವ ಚಟುವಟಿಕೆಗಳು, ಅದರಿಂದ ಮನಸ್ಸಿನ ಮೇಲೆ ಆಗುವ ಪರಿಣಾಮ, ಅಲ್ಲಿಯ ಜೀವನ, ಆಹಾರ, ಇತ್ಯಾದಿ ಹಲವು ಕಲ್ಪನೆಗಳು ಮೂಡುತ್ತವೆ. ಆದರೆ ಇದು ವೈಜ್ಞಾನಿಕ ಕಾದಂಬರಿ ಅಲ್ಲ, ಅವುಗಳನ್ನು ಆಶಿಸಬೇಡಿ ಎಂದು ಅವರೇ ಸಂದರ್ಶನದಲ್ಲಿ ಹೇಳಿದುದನ್ನು ಓದಿದ ನೆನಪು. ಅಂದ ಮೇಲೆ ಇದರಲ್ಲಿ ವೈಜ್ಞಾನಿಕ ಮಾಹಿತಿಗಳಿಲ್ಲ, ಇರುವ ವಿವರಣೆಗಳಲ್ಲೂ ಹಲವು ತಪ್ಪುಗಳಿವೆ ಎಂಬುದನ್ನು ಬಿಟ್ಟುಬಿಡೋಣ.</p>
<p>ಇನ್ನುಳಿದಂತೆ ಇದು ಭೈರಪ್ಪನವರ ಇತರೆ ಹಲವು ಕಾದಂಬರಿಗಳಲ್ಲಿ ಈಗಾಗಲೆ ಬಂದು ಹೋದ ಬೀಜ-ಕ್ಷೇತ್ರ ಜಿಜ್ಞಾಸೆ, ಮನುಷ್ಯ-ಮನುಷ್ಯರ ಸಂಬಂಧಗಳ ಜಿಜ್ಞಾಸೆ, ಹೆಣ್ಣು-ಗಂಡು, ಇತ್ಯಾದಿ ಎಲ್ಲ ಭೈರಪ್ಪನವರು ಹಲವು ಸಲ ಬರೆದ ವಿಷಯಗಳೇ ಆಗಿವೆ. ಭೈರಪ್ಪ ಎಂದೊಡನೆ ಅತಿಯಾದ ಅಪೇಕ್ಷೆ ಇಟ್ಟುಕೊಂಡು ಓದಿದರೆ ನಿರಾಸೆ ಖಚಿತ.</p>
<p>ಕನ್ನಡದಲ್ಲಿ ಪ್ರಕಟವಾಗುವ ಹಲವು ಕಾದಂಬರಿಗಳ ಮಟ್ಟಕ್ಕೆ ಹೋಲಿಸಿದರೆ ಇದೇನೂ ಕಳಪೆ ಕಾದಂಬರಿ ಅಲ್ಲ. ಆದರೆ ಭೈರಪ್ಪ ಎಂದೊಡನೆ ಅವರ ಕಾದಂಬರಿಗೆ ನಾವೇ ಒಂದು ಕಲ್ಪಿತ ಮಟ್ಟವನ್ನು ಹಾಕಿಕೊಂಡಿರುತ್ತೇವೆ. ಅದನ್ನು ಇದು ತಲುಪಿಲ್ಲ ಎಂದು ನಿರಾಸೆಯಾಗುತ್ತದೆ.</p>
<p>ಇನ್ನು ಭೈರಪ್ಪನವರನ್ನು ದೂಷಿಸಲು ಕಾತರರಾಗಿರುವವರಿಗೆ ಈ ಕಾದಂಬರಿಯಲ್ಲಿ ಅವರು ಹಲವು ಅನುಕೂಲಗಳನ್ನು ತಾವಾಗಿಯೇ ಮಾಡಿಕೊಟ್ಟಿದ್ದಾರೆ. ಈಗಾಗಲೆ ಒಬ್ಬರು ಅಂತಹ ದೋಷಗಳನ್ನು ಮಾತ್ರವೇ ಹುಡುಕಿ ಜಾಲತಾಣವೊಂದರಲ್ಲಿ ಬರೆದೂ ಇದ್ದಾರೆ.</p>
</div>
]]></content:encoded>
					
					<wfw:commentRss>http://pavanaja.com/kannada/general1/yaana/feed/</wfw:commentRss>
			<slash:comments>1</slash:comments>
		
		
			</item>
		<item>
		<title>ಪಿತ್ತ ಸಚಿವ!?</title>
		<link>http://pavanaja.com/kannada/general1/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/</link>
					<comments>http://pavanaja.com/kannada/general1/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/#comments</comments>
		
		<dc:creator><![CDATA[admin]]></dc:creator>
		<pubDate>Wed, 01 Oct 2008 01:34:47 +0000</pubDate>
				<category><![CDATA[Featured Article]]></category>
		<category><![CDATA[General]]></category>
		<guid isPermaLink="false">http://pavanaja.com/?p=486</guid>

					<description><![CDATA[ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)      ]]></description>
										<content:encoded><![CDATA[<p>ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)<br />
 <img decoding="async" src="http://vishvakannada.com/files/TV-capture0001-s.jpg"  alt="" />  </p>
]]></content:encoded>
					
					<wfw:commentRss>http://pavanaja.com/kannada/general1/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/feed/</wfw:commentRss>
			<slash:comments>2</slash:comments>
		
		
			</item>
		<item>
		<title>ಕನ್ನಡ ಬ್ಲಾಗೋತ್ತಮರ ಸಭೆ</title>
		<link>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/</link>
					<comments>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/#comments</comments>
		
		<dc:creator><![CDATA[admin]]></dc:creator>
		<pubDate>Sun, 09 Mar 2008 23:31:37 +0000</pubDate>
				<category><![CDATA[Featured Article]]></category>
		<category><![CDATA[General]]></category>
		<guid isPermaLink="false">http://pavanaja.com/?p=479</guid>

					<description><![CDATA[ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.      ]]></description>
										<content:encoded><![CDATA[<p>ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.</p>
<p>ಪ್ರಥಮ ಬಾರಿಗೆ ಕನ್ನಡ ಬ್ಲಾಗೋತ್ತಮರು ಸಭೆ ಸೇರುತ್ತಿದ್ದಾರೆ. ಮಾರ್ಚ್ ೧೬ರಂದು ಸಂಜೆ ೪ ಘಂಟೆಗೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಎಲ್ಲರೂ ಸೇರುತ್ತಿದ್ದಾರೆ. ನೀವೂ ಬನ್ನಿ. ಆಸಕ್ತರನ್ನೂ ಕರೆತನ್ನಿ.</p>
<p> <img decoding="async" src="http://vishvakannada.com/files/blog-meet-invite.jpg"  align="center"></p>
<p><b><center>ಕನ್ನಡದ ಬ್ಲಾಗಿಗಳೆಲ್ಲ ಒಂದಾಗಿ ಬನ್ನಿ</center></b>  </p>
]]></content:encoded>
					
					<wfw:commentRss>http://pavanaja.com/kannada/general1/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/feed/</wfw:commentRss>
			<slash:comments>1</slash:comments>
		
		
			</item>
		<item>
		<title>ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು</title>
		<link>http://pavanaja.com/kannada/general1/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/</link>
					<comments>http://pavanaja.com/kannada/general1/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/#respond</comments>
		
		<dc:creator><![CDATA[admin]]></dc:creator>
		<pubDate>Sun, 04 Nov 2007 15:11:02 +0000</pubDate>
				<category><![CDATA[General]]></category>
		<guid isPermaLink="false">http://pavanaja.com/?p=460</guid>

					<description><![CDATA[ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.      ]]></description>
										<content:encoded><![CDATA[<p>ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.</p>
<p><img decoding="async" src="http://www.vishvakannada.com/archives/photos/vol4no5/nagesh.jpg" align="right">ನನಗೆ ವೈಯಕ್ತಿಕವಾಗಿ ಈ ಸಲದ ಪ್ರಶಸ್ತಿ ತುಂಬ ಸಂತಸವನ್ನು ತಂದಿದೆ. ಅದಕ್ಕೆ ಕಾರಣ ಪ್ರಶಸ್ತಿಗೆ ಭಾಜನರಾದ ನಾಗೇಶ ಹೆಗಡೆ ಮತ್ತು ಜಿ.ಟಿ. ನಾರಾಯಣ ರಾವ್. ಇವರಿಬ್ಬರೂ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಜಿ.ಟಿ.ಎನ್ ಬಗ್ಗೆ ನಾನು ಈಗಾಗಲೆ ಇಸ್ಮಾಯಿಲ್ ಅವರ ಬ್ಲಾಗಿನ ಕೆಳಗೆ <a href="http://ismail.in/node/12">ಟಿಪ್ಪಣಿ ನಮೂದಿಸಿದ್ದೇನೆ</a>. ನಾಗೇಶ ಹೆಗಡೆಯವರು ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ವರ್ಷಗಳಿಂದೆ ವಿಜ್ಞಾನ ವಿಶೇಷ ಹೆಸರಿನ ಅಂಕಣ ಬರೆಯುತ್ತಿದ್ದಾರೆ. ಪ್ರಜಾವಾಣಿಯಲ್ಲಿ ಸಹಾಯಕ ಸಂಪಾದಕರಾಗಿ ಮತ್ತು ಸುಧಾ ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ.</p>
<p>ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು. ಇದು ಕನ್ನಡ ವಿಜ್ಞಾನ ಲೇಖಕರುಗಳೆಲ್ಲರಿಗೆ ಸಂದ ಗೌರವ ಎಂದೂ ಹೇಳಬಹುದು.  </p>
]]></content:encoded>
					
					<wfw:commentRss>http://pavanaja.com/kannada/general1/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಭಾರತೀಯ ಗೋವು &#8211; ವಿದೇಶೀ ಗೋವು</title>
		<link>http://pavanaja.com/kannada/general1/%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%97%e0%b3%8b%e0%b2%b5%e0%b3%81-%e0%b2%b5%e0%b2%bf%e0%b2%a6%e0%b3%87%e0%b2%b6%e0%b3%80-%e0%b2%97%e0%b3%8b%e0%b2%b5%e0%b3%81/</link>
					<comments>http://pavanaja.com/kannada/general1/%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%97%e0%b3%8b%e0%b2%b5%e0%b3%81-%e0%b2%b5%e0%b2%bf%e0%b2%a6%e0%b3%87%e0%b2%b6%e0%b3%80-%e0%b2%97%e0%b3%8b%e0%b2%b5%e0%b3%81/#respond</comments>
		
		<dc:creator><![CDATA[admin]]></dc:creator>
		<pubDate>Mon, 03 Sep 2007 00:10:35 +0000</pubDate>
				<category><![CDATA[General]]></category>
		<guid isPermaLink="false">http://pavanaja.com/?p=453</guid>

					<description><![CDATA[ಹೊಸನಗರ <a href="http://www.ramachandrapuramath.org">ಶ್ರೀ ರಾಮಚಂದ್ರಾಪುರ ಮಠದ</a> <a href="http://vishvakannada.com/node/262">ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು</a> ಭಾರತೀಯ <a href="http://www.vishwagou.org">ಗೋತಳಿಗಳ ಸಂರಕ್ಷಣೆಗೆ</a> ಕಂಕಣಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ <a href="http://vishvakannada.com/node/372">ತಿಳಿದಿರಬಹುದು</a>. ವಿದೇಶಿ ತಳಿಯ ಹಸುಗಳು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ, ಅವುಗಳಿಗೆ ತುಂಬ ಔಷಧೋಪಚಾರ, ನಿಯಂತ್ರಿತ ಹವೆ ಎಲ್ಲ ಅಗತ್ಯ ಎಂಬುದಾಗಿ ನಾವೆಲ್ಲ ಕೇಳಿದ್ದೇವೆ. ಭಾರತೀಯ ಗೋತಳಿಗಳು ಇಲ್ಲಿಯ ಹವಾಮಾನಕ್ಕೆ ಒಗ್ಗಿದವು. ಅವುಗಳಿಗೆ ಈ ಉಪಚಾರಗಳ ಅಗತ್ಯವಿಲ್ಲ. ನಾವು ಚಿಕ್ಕವರಿದ್ದಾಗ ಭಾರತೀಯ ಹಸುಗಳ ಹಾಲನ್ನೇ ಕುಡಿದವರು. ಆಗ ಯಾವ ಹಸುವಿಗೂ ದೊಡ್ಡ ಖಾಯಿಲೆ ಬಾಧಿಸಿದ್ದು ನನಗೆ ನೆನಪಿಲ್ಲ. ಚಿಕ್ಕಪುಟ್ಟ ಖಾಯಿಲೆಗಳು ಬಾಧಿಸಿದರೂ ಹಳ್ಳಿ ಔಷಧಿಂದಲೇ ಅವು ಗುಣವಾಗುತ್ತಿದ್ದವು. ಈಗ ಎಲ್ಲರೂ ಸಾಕುತ್ತಿರುವ ವಿದೇಶೀ ಮೂಲದ ತಳಿಸಂಕರದಿಂದ ಹುಟ್ಟಿದ ಹಸುಗಳಿಗೆ ದೊಡ್ಡ ದೊಡ್ಡ ಖಾಯಿಲೆಗಳೇ ಬಾಧಿಸುತ್ತವೆ. ಅವಕ್ಕೆ ನೀಡಬೇಕಾದ ಔಷಧಿಗೂ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದೆಲ್ಲ ಯಾಕೆ ಹೇಳಿದ್ದೆಂದರೆ ಒಂದು ಉದಾಹರಣೆ ನನ್ನಲ್ಲೇ ಇದೆ.      ]]></description>
										<content:encoded><![CDATA[<p>ಹೊಸನಗರ <a href="http://www.ramachandrapuramath.org">ಶ್ರೀ ರಾಮಚಂದ್ರಾಪುರ ಮಠದ</a> <a href="http://vishvakannada.com/node/262">ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು</a> ಭಾರತೀಯ <a href="http://www.vishwagou.org">ಗೋತಳಿಗಳ ಸಂರಕ್ಷಣೆಗೆ</a> ಕಂಕಣಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ <a href="http://vishvakannada.com/node/372">ತಿಳಿದಿರಬಹುದು</a>. ವಿದೇಶಿ ತಳಿಯ ಹಸುಗಳು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ, ಅವುಗಳಿಗೆ ತುಂಬ ಔಷಧೋಪಚಾರ, ನಿಯಂತ್ರಿತ ಹವೆ ಎಲ್ಲ ಅಗತ್ಯ ಎಂಬುದಾಗಿ ನಾವೆಲ್ಲ ಕೇಳಿದ್ದೇವೆ. ಭಾರತೀಯ ಗೋತಳಿಗಳು ಇಲ್ಲಿಯ ಹವಾಮಾನಕ್ಕೆ ಒಗ್ಗಿದವು. ಅವುಗಳಿಗೆ ಈ ಉಪಚಾರಗಳ ಅಗತ್ಯವಿಲ್ಲ. ನಾವು ಚಿಕ್ಕವರಿದ್ದಾಗ ಭಾರತೀಯ ಹಸುಗಳ ಹಾಲನ್ನೇ ಕುಡಿದವರು. ಆಗ ಯಾವ ಹಸುವಿಗೂ ದೊಡ್ಡ ಖಾಯಿಲೆ ಬಾಧಿಸಿದ್ದು ನನಗೆ ನೆನಪಿಲ್ಲ. ಚಿಕ್ಕಪುಟ್ಟ ಖಾಯಿಲೆಗಳು ಬಾಧಿಸಿದರೂ ಹಳ್ಳಿ ಔಷಧಿಂದಲೇ ಅವು ಗುಣವಾಗುತ್ತಿದ್ದವು. ಈಗ ಎಲ್ಲರೂ ಸಾಕುತ್ತಿರುವ ವಿದೇಶೀ ಮೂಲದ ತಳಿಸಂಕರದಿಂದ ಹುಟ್ಟಿದ ಹಸುಗಳಿಗೆ ದೊಡ್ಡ ದೊಡ್ಡ ಖಾಯಿಲೆಗಳೇ ಬಾಧಿಸುತ್ತವೆ. ಅವಕ್ಕೆ ನೀಡಬೇಕಾದ ಔಷಧಿಗೂ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದೆಲ್ಲ ಯಾಕೆ ಹೇಳಿದ್ದೆಂದರೆ ಒಂದು ಉದಾಹರಣೆ ನನ್ನಲ್ಲೇ ಇದೆ.</p>
<p>ಇದು ಜರುಗಿದ್ದು ಸುಮಾರು ಒಂದು ತಿಂಗಳ ಮೊದಲು. ಒಮ್ಮೆ ಸುಳ್ಯದ ಸಮೀಪದ ಊರಿನಿಂದ ನನ್ನ ತಮ್ಮ ರಾಧಾಕೃಷ್ಣನ ಫೋನು ಬಂತು. ತಮ್ಮ ಅಂದರೆ ಖಾಸಾ ತಮ್ಮ ಅಲ್ಲ, ಬೆಂಗಳೂರಿಗರ ಭಾಷೆಯಲ್ಲಿ ಕಸಿನ್. ನಾನು ಮಾತ್ರ ತಮ್ಮ ಎಂದೇ ಕರೆಯುವುದು. ಅವನೂ ನನ್ನನ್ನು ಅಣ್ಣ ಎಂದೇ ಕರೆಯುವುದು. ಇರಲಿ. ಅವನು ಫೋನು ಮಾಡಿ ಹೇಳಿದ &#8220;ಪವನಜಣ್ಣ, ಒಂದು ಔಷಧಿ ಹೆಸರು ಬರೆದುಕೊ, ಅದು ಬೆಂಗಳೂರಿನಲ್ಲಿ ಸಿಗುತ್ತದೋ ನೋಡು.  ನನ್ನ ದನಕ್ಕೆ ತೀವ್ರ ಖಾಯಿಲೆ ಇದೆ. ಅದಕ್ಕೆ ಈ ಔಷಧಿಯೇ ಬೇಕಂತೆ. ಅದು ಇಲ್ಲಿ ಎಲ್ಲೂ ಸಿಗುವುದಿಲ್ಲ. ಅಲ್ಲಿ ಸಿಕ್ಕರೆ ಕೊಂಡುಕೊಂಡು ಕೂಡಲೆ ಕಳುಹಿಸುವ ಏರ್ಪಾಡು ಮಾಡು&#8221;. ನಾನು ಬೆಂಗಳೂರಿನ ಕೆಲವು ಔಷಧಿ ಅಂಗಡಿಗಳಲ್ಲಿ ಹುಡುಕಾಡಿದಾಗ ಒಂದು ಅಂಗಡಿಯಲ್ಲಿ ಆ ಔಷಧಿ ದೊರೆಯಿತು. ೨೫ ಮಿ.ಲಿ. ಔಷಧಿಯ ಬಾಟಲಿಗೆ ೧೨೦೦ ರೂ. ಬೆಲೆ. ಅದನ್ನು ೨೫ ಡಿಗ್ರಿ ಸೆಲಿಷಿಯಸ್ ತಾಪಮಾನದ ಒಳಗೆ ಇರುವಂತೆ ನೋಡಿಕೊಳ್ಳಬೇಕು. ಕೊಂಡುಕೊಂಡರೂ ಅದನ್ನು ಬಿಸಿಯಾಗದಂತೆ ಊರಿಗೆ ಕಳುಹಿಸಬೇಕು. ನನ್ನ ಸಂಬಂಧಿಯೊಬ್ಬ ಮಂಗಳೂರು ಬೆಂಗಳೂರು ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಾನೆ. ಅವನಿಗೆ ಫೋನಾಯಿಸಿದೆ. ಅದೃಷ್ಟಕ್ಕೆ ಅವನು ಆ ದಿನ ಬೆಂಗಳೂರಿನಲ್ಲಿದ್ದ. ಅಂದರೆ ಆ ದಿನ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಾನೆ ಎಂದಾಯಿತು. ಅವನಿಗೂ, ರಾಧಾಕೃಷ್ಣನಿಗೂ ಫೋನಾಯಿಸಿ ಎಲ್ಲ ಏರ್ಪಾಡು ಮಾಡಿಯಾಯಿತು. ಔಷಧಿಯನ್ನು ನನ್ನ ಮನೆಗೆ ಕೊಂಡುಹೋಗಿ ಫ್ರಿಜ್‌ನಲ್ಲಿ ಇಟ್ಟುದಾಯಿತು. ರಾತ್ರಿ ಬಸ್ಸು ಹೊರಡಲು ಇನ್ನೇನು ೧೫ ನಿಮಿಷ ಇದೆ ಎಂದಾಗ ಔಷಧಿಯನ್ನು ಅವನ ಕೈಯಲ್ಲಿ ಇಟ್ಟೆ. ಅವನ ಬಸ್ಸು ಹವಾನಿಯಂತ್ರಿತವಾಗಿದ್ದದ್ದು ನಮಗೆ ಲಾಭದಾಯಕವಾಗಿತ್ತು. ಅವನು ಔಷಧಿಯನ್ನು ಕೂಡಲೆ ಬಸ್ಸಿನ ಒಳಗೆ ಅಂದರೆ ಹವಾನಿಯಂತ್ರಿತವಾಗಿದ್ದ ಜಾಗದಲ್ಲಿ ಸುರಕ್ಷಿತವಾಗಿಟ್ಟ. ರಾಧಾಕೃಷ್ಣ ತನ್ನ ಮನೆಯಿಂದ ೫ ಕಿ.ಮೀ. ದೂರವಿರುವ ಸುಳ್ಯಕ್ಕೆ ಬಂದು ರಾತ್ರಿ ೩.೩೦ ಘಂಟೆಗೆ ಬಸ್ಸಿನಿಂದ ಆ ಔಷಧಿಯನ್ನು ತೆಗೆದುಕೊಂಡು ಹೋದ. ಬೆಳಗ್ಗೆ ಪಶುವೈದ್ಯರು ಬಂದು ಇಂಜೆಕ್ಷನ್ ನೀಡಿದರು.</p>
<p>ಇಷ್ಟೆಲ್ಲ ಪ್ರಯತ್ನ ಪಟ್ಟೂ ಆ ಹಸು ಸತ್ತು ಹೋಯಿತು. ಆಗ ನನಗೆ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಮಾತುಗಳ ನೆನಪಾಯಿತು.  ರಾಧಾಕೃಷ್ಣ ಸಾಕಿದ್ದು ಭಾರತೀಯ ತಳಿಯ ಹಸುವಾಗಿದ್ದಿದ್ದರೆ ಈ ಎಲ್ಲ ಸಮಸ್ಯೆಗಳೂ ಇರುತ್ತಿರಲಿಲ್ಲ ಎಂದು ಅನ್ನಿಸಿದ್ದೂ ಹೌದು.  </p>
]]></content:encoded>
					
					<wfw:commentRss>http://pavanaja.com/kannada/general1/%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%97%e0%b3%8b%e0%b2%b5%e0%b3%81-%e0%b2%b5%e0%b2%bf%e0%b2%a6%e0%b3%87%e0%b2%b6%e0%b3%80-%e0%b2%97%e0%b3%8b%e0%b2%b5%e0%b3%81/feed/</wfw:commentRss>
			<slash:comments>0</slash:comments>
		
		
			</item>
		<item>
		<title>ನಾವೂ ಹೀಗೆ ಮಾಡಬೇಕು</title>
		<link>http://pavanaja.com/kannada/general1/%e0%b2%a8%e0%b2%be%e0%b2%b5%e0%b3%82-%e0%b2%b9%e0%b3%80%e0%b2%97%e0%b3%86-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/</link>
					<comments>http://pavanaja.com/kannada/general1/%e0%b2%a8%e0%b2%be%e0%b2%b5%e0%b3%82-%e0%b2%b9%e0%b3%80%e0%b2%97%e0%b3%86-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/#respond</comments>
		
		<dc:creator><![CDATA[admin]]></dc:creator>
		<pubDate>Sat, 28 Jul 2007 20:56:14 +0000</pubDate>
				<category><![CDATA[General]]></category>
		<guid isPermaLink="false">http://pavanaja.com/?p=449</guid>

					<description><![CDATA[ಚೀನಾದಲ್ಲಿ ಒಬ್ಬ ಲಾಯರ್‍ ಮೆಕ್‌ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು <a href="http://uk.news.yahoo.com/rtrs/20070727/tod-uk-china-mcdonalds-d987f7f.html">ವರದಿಯಾಗಿದೆ</a>. ಮೆಕ್‌ಡೊನಾಲ್ಡ್‌ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.      ]]></description>
										<content:encoded><![CDATA[<p>ಚೀನಾದಲ್ಲಿ ಒಬ್ಬ ಲಾಯರ್&#x200d; ಮೆಕ್‌ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು <a href="http://uk.news.yahoo.com/rtrs/20070727/tod-uk-china-mcdonalds-d987f7f.html">ವರದಿಯಾಗಿದೆ</a>. ಮೆಕ್‌ಡೊನಾಲ್ಡ್‌ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.</p>
<p>ಈ ಪ್ರಕರಣ ನಮಗೆ ಕಣ್ಣುತೆರೆಸಬೇಕು. ನಮ್ಮದೇ ಆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕರಾರಸಾಸಂ) ಉದಾಹರಣೆಯನ್ನು ನೋಡೋಣ. ಅವರು ಕನ್ನಡವನ್ನು ಬಳಸುವುದಿಲ್ಲ. ಅವರ ನಿರ್ವಾಹಕರು (ಕಂಡಕ್ಟರ್&#x200d;) ಕುತ್ತಿಗೆಗೆ ನೇತಾಡಿಸಿಕೊಳ್ಳುವ ಟಿಕೆಟ್ ನೀಡುವ ಯಂತ್ರದಲ್ಲಿ ಕನ್ನಡವಿಲ್ಲ. ಕರ್ನಾಟಕದ ಹಳ್ಳಿಯೊಂದರಿಂದ ಇನ್ನೊಂದು ಹಳ್ಳಿಗೆ ಹೋಗಬೇಕಾಗಿರುವ ಕನ್ನಡಿಗರು ಇಂಗ್ಲಿಶ್ ಭಾಷೆಯಲ್ಲಿ ಟಿಕೆಟ್ ಕೊಳ್ಳಬೇಕಾಗಿದೆ. ಅವರು ಅಂತರಜಾಲ ತಾಣದ ಮೂಲಕ ಮುಂಗಡ ಟಿಕೆಟ್ ಕಾದಿರಿಸುವ ವ್ಯವಸ್ಥೆ <a href="http://ksrtc.in/HomePage.htm">ಮಾಡಿದ್ದಾರೆ</a>. ಈ ತಾಣದಲ್ಲೂ ಕನ್ನಡವಿಲ್ಲ. ಇಲ್ಲ ಎಂದರೆ ಇಲ್ಲವೇ ಇಲ್ಲವೆಂದಲ್ಲ. ಕರಾರಸಾಸಂ ಬಗ್ಗೆ ವಿವರಗಳು ಕನ್ನಡದಲ್ಲೂ ಇವೆ. ಆದರೆ ಬಸ್ಸುಗಳ ವೇಳಾಪಟ್ಟಿ, ದರ, ಮಾರ್ಗಸೂಚಿ, ಮುಂಗಡ ಆಸನ ಕಾದಿರಿಸುವಿಕೆ ಇತ್ಯಾದಿಗಳು ಇಂಗ್ಲೀಶಿನಲ್ಲೇ ಇವೆ. ಅಂದರೆ ದತ್ತಸಂಚಯದಿಂದ ಮಾಹಿತಿ ಪಡೆಯುವಿಕೆಗಳು ಇಂಗ್ಲೀಶಿನಲ್ಲೇ ಇವೆ (ಡಾಟಾಬೇಸ್ ಇಂಗ್ಲೀಶಿನಲ್ಲಿದೆ). ಕರಾರಸಾಸಂಯ ಸೋದರ ಸಂಸ್ಥೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಮಸಾಸಂ) ಕೂಡ ಇದೇ ಮಾದರಿಯನ್ನು ಅನುಕರಿಸುತ್ತಿದೆ. ಅದರ <a href="http://www.bmtcinfo.com">ಅಂತರಜಾಲ ತಾಣದಲ್ಲೂ</a> ದತ್ತಸಂಚಯದಿಂದ ಬರುವ ಮಾರ್ಗಸೂಚಿ ಮಾಹಿತಿ ಇಂಗ್ಲೀಶಿನಲ್ಲೇ ಇದೆ.</p>
<p>ಕನ್ನಡಿಗರು ಖಂಡಿತವಾಗಿಯೂ ಈ ಎರಡು ಸಂಸ್ಥೆಗಳ ವಿರುದ್ಧ ಗ್ರಾಹಕ ವೇದಿಕೆಯಲ್ಲಿ ಕೇಸು ದಾಖಲಿಸಬಹುದು.  </p>
]]></content:encoded>
					
					<wfw:commentRss>http://pavanaja.com/kannada/general1/%e0%b2%a8%e0%b2%be%e0%b2%b5%e0%b3%82-%e0%b2%b9%e0%b3%80%e0%b2%97%e0%b3%86-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಘೋಷಿಸಿ ಧಾಳಿ ಮಾಡಿದರೇನು ಫಲ?</title>
		<link>http://pavanaja.com/kannada/general1/%e0%b2%98%e0%b3%8b%e0%b2%b7%e0%b2%bf%e0%b2%b8%e0%b2%bf-%e0%b2%a7%e0%b2%be%e0%b2%b3%e0%b2%bf-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b0%e0%b3%87%e0%b2%a8%e0%b3%81-%e0%b2%ab%e0%b2%b2/</link>
					<comments>http://pavanaja.com/kannada/general1/%e0%b2%98%e0%b3%8b%e0%b2%b7%e0%b2%bf%e0%b2%b8%e0%b2%bf-%e0%b2%a7%e0%b2%be%e0%b2%b3%e0%b2%bf-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b0%e0%b3%87%e0%b2%a8%e0%b3%81-%e0%b2%ab%e0%b2%b2/#comments</comments>
		
		<dc:creator><![CDATA[admin]]></dc:creator>
		<pubDate>Thu, 28 Jun 2007 16:55:06 +0000</pubDate>
				<category><![CDATA[General]]></category>
		<guid isPermaLink="false">http://pavanaja.com/?p=444</guid>

					<description><![CDATA[ಜೂನ್ ೨೨ರಂದು ಎಲ್ಲ ಪತ್ರಿಕೆಗಳಲ್ಲಿ ಚಿತ್ರ ಸಮೇತ ಒಂದು ಸುದ್ದಿ ಪ್ರಕಟವಾಗಿತ್ತು. ಡೆಕ್ಕನ್ ಹೆರಾಲ್ಡ್‌ನ ಅಂತರಜಾಲ ಆವೃತ್ತಿಯಲ್ಲಿ ಅದನ್ನು ಈಗಲೂ <a href="http://www.deccanherald.com/Content/Jun222007/city200706228792.asp">ಓದಬಹುದು</a>. ಆ ಸುದ್ದಿ ಏನೆಂದರೆ ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯವರು ಬೆಂಗಳೂರಿನ ಸುತ್ತಮುತ್ತ ಕಳ್ಳಭಟ್ಟಿ ತಯಾರಿಸುವ ಸ್ಥಳಗಳಿಗೆ ಧಾಳಿ ಇತ್ತು ಕಳ್ಳಭಟ್ಟಿ ದಾಸ್ತಾನುಗಳನ್ನು ನಾಶ ಮಾಡಿದರು ಎಂಬುದಾಗಿ. ಸುದ್ದಿಯಲ್ಲಿ ಬರುವ ಒಂದು ಪ್ಯಾರವನ್ನು ಗಮನಿಸಿ-      ]]></description>
										<content:encoded><![CDATA[<p>ಜೂನ್ ೨೨ರಂದು ಎಲ್ಲ ಪತ್ರಿಕೆಗಳಲ್ಲಿ ಚಿತ್ರ ಸಮೇತ ಒಂದು ಸುದ್ದಿ ಪ್ರಕಟವಾಗಿತ್ತು. ಡೆಕ್ಕನ್ ಹೆರಾಲ್ಡ್‌ನ ಅಂತರಜಾಲ ಆವೃತ್ತಿಯಲ್ಲಿ ಅದನ್ನು ಈಗಲೂ <a href="http://www.deccanherald.com/Content/Jun222007/city200706228792.asp">ಓದಬಹುದು</a>. ಆ ಸುದ್ದಿ ಏನೆಂದರೆ ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯವರು ಬೆಂಗಳೂರಿನ ಸುತ್ತಮುತ್ತ ಕಳ್ಳಭಟ್ಟಿ ತಯಾರಿಸುವ ಸ್ಥಳಗಳಿಗೆ ಧಾಳಿ ಇತ್ತು ಕಳ್ಳಭಟ್ಟಿ ದಾಸ್ತಾನುಗಳನ್ನು ನಾಶ ಮಾಡಿದರು ಎಂಬುದಾಗಿ. ಸುದ್ದಿಯಲ್ಲಿ ಬರುವ ಒಂದು ಪ್ಯಾರವನ್ನು ಗಮನಿಸಿ-</p>
<p>The kingpins of the racket &#8211; Gate Akbar, Sugana Babu and Sunai John &#8211; are absconding. “We’ll track them down and book them under the Goonda Act because there are lot of cases pending against them,” he added.</p>
<p>ಇದರಲ್ಲೇನು ವಿಶೇಷ ಅನ್ನುತ್ತೀರಾ? ಸಾಮಾನ್ಯವಾಗಿ ಎಲ್ಲ ಧಾಳಿಗಳಲ್ಲೂ ಧಂಧೆಯನ್ನು ನಡೆಸುವವರು ತಪ್ಪಿಸಿಕೊಳ್ಳುತ್ತಾರೆ. ಕೆಲವು ಚಿಲ್ಲರೆ ಕೂಲಿಗಳು ಮಾತ್ರ ಸಿಕ್ಕಿಹಾಕಿಕೊಳ್ಳುತ್ತಾರೆ ಎನ್ನುತ್ತೀರಾ? ಹೌದು. ಅದಕ್ಕೆ ಕಾರಣ ಗೊತ್ತೆ? ನನಗೆ ಜೂನ್ ೨೦ರಂದು ಕರ್ನಾಟಕ ಸರಕಾರದ ವಾರ್ತಾ ಇಲಾಖೆಯಿಂದ ಒಂದು ಇಮೈಲ್ ಬಂತು. ಅದನ್ನು ಕೆಳಗೆ ನಕಲು ಮಾಡಿದ್ದೇನೆ &#8211;</p>
<table>
<tr>
<td>
ಪತ್ರಿಕಾ ಆಮಂತ್ರಣ</p>
<p>ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ಎಂ.ಎ. ಸಾದಿಕ್ ಹಾಗೂ  ಅಬಕಾರಿ ಆಯುಕ್ತರ ನೇತೃತ್ವದಲ್ಲಿ ಜೂನ್ ೨೧ ರಂದು ನಗರದ ಸುತ್ತಮುತ್ತಲಿನ ಕಳ್ಳಬಟ್ಟಿ ಪ್ರದೇಶಗಳಿಗೆ ಹಠಾತ್ ಅಬಕಾರಿ ದಾಳಿ ನಡೆಸಲಿದ್ದಾರೆ.<br />
ಅಬಕಾರಿ ಇಲಾಖೆ  ವಾಹನವು ಅಂದು ಬೆಳಿಗ್ಗೆ ೮.೦೦ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇಲ್ಲಿಂದ ಹೊರಡಲಿದೆ.<br />
ಮಾನ್ಯತೆ ಪಡೆದ ಪತ್ರಕರ್ತರು,  ಪತ್ರಿಕಾ ಛಾಯಾಗ್ರಾಹಕರು ಹಾಗೂ ವಿದ್ಯುನ್ಮಾನ ಮಾಧ್ಯಮದ  ಪ್ರತಿನಿಧಿಗಳು  ಈ  ಕಾರ್ಯಕ್ರಮದಲ್ಲಿ   ಭಾಗವಹಿಸಲು ಕೋರಿದೆ.</p>
<p>      (ಸಿ.ಎಂ. ರಂಗಾರೆಡ್ಡಿ)<br />
     ಆಯುಕ್ತರ ಪರವಾಗಿ.
</td>
</tr>
</table>
<p>ಈಗ ಹೇಳಿ? ಈ ರೀತಿ ಮೊದಲೆ ಎಲ್ಲರಿಗೂ ಟಾಂಟಾಂ ಮಾಡಿ ಧಾಳಿ ಮಾಡಿದರೆ ಧಂಧೆ ನಡೆಸುವ ವ್ಯಕ್ತಿಗಳು ಸಿಗುತ್ತಾರೆಯೇ? ಧಾಳಿಯ ಉದ್ದೇಶ ಏನು ಎಂಬುದು ಖಾತ್ರಿಯಾಯಿತು ತಾನೆ?  </p>
]]></content:encoded>
					
					<wfw:commentRss>http://pavanaja.com/kannada/general1/%e0%b2%98%e0%b3%8b%e0%b2%b7%e0%b2%bf%e0%b2%b8%e0%b2%bf-%e0%b2%a7%e0%b2%be%e0%b2%b3%e0%b2%bf-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b0%e0%b3%87%e0%b2%a8%e0%b3%81-%e0%b2%ab%e0%b2%b2/feed/</wfw:commentRss>
			<slash:comments>1</slash:comments>
		
		
			</item>
	</channel>
</rss>

<!--
Performance optimized by W3 Total Cache. Learn more: https://www.boldgrid.com/w3-total-cache/?utm_source=w3tc&utm_medium=footer_comment&utm_campaign=free_plugin

Page Caching using Disk: Enhanced 

Served from: pavanaja.com @ 2026-06-22 20:31:04 by W3 Total Cache
-->